'' ಹಬ್ಬಗಳು ''
ಬನ್ನಿರೆಲ್ಲ ಸಾರೋಣ ಹಬ್ಬಗಳ ಕಾರಣ ವಿಶ್ವಶಾಂತಿಗೆ ಮಾನವೀಯತೆಯೇ ತೋರಣ ||೧||
ಶುಭ ಸೋಜಿಗ ದಿನಗಳವು ಕೂಡಿಸುವವು ಮನ ಮಂದಿಯ ಬಿತ್ತರಿಸುತ ತನ್ನಯ ಹಿರಿಮೆಗಳ ಸ್ವಚ್ಛ ಸಿಂಗಾರ ಮನೆ ಬೀದಿಗಳ ||೨||
ಅಮ್ಮನ ಘನ ರುಚಿಯ ಖಾದ್ಯಗಳು ಗಮ್ಮತ್ತನ್ನು ಹೆಚ್ಚಿಸೋ ಕ್ರೀಡೆಗಳು ಪ್ರಾರ್ಥನ ನರ್ತನ ನಲಿವಿನ ಗೀತೆಗಳು ಸಹೃದಯರ ಪ್ರೀತಿ, ಹಾರೈಕೆಗಳು ||೩||
ಪಲ್ಲಕ್ಕಿ ದಿಬ್ಬಣಗಳ ಸಂಭ್ರಮ ಊರೇ ಹರುಷದ ಅಂದಣ ದಯೆ ಧಾರ್ಮ ದಯೆ ಧರ್ಮ ಜಾಗೃತಿ ಸಂಚಲನ ಕಾಯಕವೇ ಬದುಕಿಗೆ ಸವಿ ಹೂರಣ ||೪||
ಮಹನೀಯರ ಅನುಭಾವ ತತ್ವಗಳು ಬೆಳಕಾಗಿ ಹರಿಯುತಿಹವು ಪ್ರತಿ ವರುಷವು ಸಾಧಕ ಬಾಧಕ ಬೇವು ಬೆಲ್ಲ ಸಮರಸ ಗಟ್ಟಿಯಾಗಲಿ ಮೆಲ್ಲ ಮೆಲ್ಲ ||೫||
No comments are available!
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
No comments are available!