ಕಣ್ಣೀರ ಪ್ರವಾಹ ಹರಿಯುತಿದೆ ಬಡತನದ ಕಹಿಘಮ ಎಲ್ಲೆಲ್ಲೂ ಬೀರುತಿದೆ ತುತ್ತಿನ ಚೀಲಕಾಗಿ ಯುದ್ಧವೇ ಮೊಳಗುತಿದೆ ಬಿಸಿಲಿನ ಬೇಗೆ ಬೆಳುದಿಂಗಳೆನೆ ಕಳೆಯುತಿದೆ ಬೆಳಕಿದ್ದೂ ಕತ್ತಲೆಯು ತುಂಬುತಿದೆ ಶಬ್ಧದ ಹಿಂದಿನ ನಿಶ್ಶಬ್ಧ ಗೌಣವಾಗುತಿದೆ
ಹೆಮ್ಮಾರಿಯು ಊದುತಿದೆ ರಣಕಹಳೆ ಬೃಹತ್ನಗರಗಳ ಕಾವಬೇಗೆಯಲಿ ಬೆಂದವರು ಹೊರಟೇ ಹೊರಟಿದ್ದಾರೆ ಗುಳೆ ಆದರೂ ಚತುರ್ಮುಖ ಬ್ರಹ್ಮನು ತಲ್ಲೀನ ಶಾರದೆ ನುಡಿಸುವ ಇಂಚರದ ಪ್ರಾಣತಂತುವಿನಲೆ ಶಿವೆಯಿಲ್ಲದೆ ಇರದ ಶಿವನಂತೂ ಮಗ್ನ ಅರ್ಧಾಂಗಿಯ ಕೂಡೆ ಸಲ್ಲಾಪದಲೆ ಹೃದಯಕಮಲದಲ್ಲೇ ಲಕ್ಷ್ಮಿಯನ್ನಿರಿಸಿಕೊಂಡ ಪದ್ಮನಾಭನು ನಗುತಿಹನು ಸುಖ ನಿದ್ರೆಯಲೆ
ಶಂಖ-ಚಕ್ರ, ತ್ರಿಶೂಲಗಳು ಸಾಲುತಿಲ್ಲ ಅಸುರನ ಸಂಹಾರಕೆ ಯಾವ ವಿರಾಟ್ ಸ್ವರೂಪದವತಾರ ತಾಳುವನೋ ಕಾಣೆ ಈ ದೈತ್ಯನ ನಿರ್ನಾಮಕೆ ಕಾದೇ ಕಾಯಬೇಕಿದೆ ಆ ಕ್ಷಣಕೆ......
All The Best priyankha keep going. God bless you.
Nice
👌👌
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
H R YASHASWINI
Jul 08,2020All The Best priyankha keep going. God bless you.
Shree
Jul 06,2020Nice
Karan
Jul 06,2020👌👌