ಮರಗಳ ಕೊರಗು
ದಶಕ ದಶಕಗಳಿಂದ ನೀಡುತ್ತಿವೆ ತಂಪಾದ ನೆರಳು, ಉಸಿರಾಡಲು ಸ್ವಚ್ಛ ಗಾಳಿ; ವರುಣನ ಆರ್ಭಟಕ್ಕೆ, ಬಿದ್ದು ಒದ್ದಾಡುತ್ತಿವೆ ಅಲ್ಲಲ್ಲಿ ಮರಗಳು ಧರೆಗುರುಳಿ!
ಮರೆತಿದ್ದೇವೆ ನಾವು ನೀವೆಲ್ಲ ಮರಗಳು ಮನುಕುಲಕ್ಕೆ ನೀಡಿದ ಆಶ್ರಯ; ರಸ್ತೆಯ ಮೇಲೆ ಉರುಳಿದೊಡೆ ಯಾರಿಗಿದೆ ಯೋಚನೆ ಅದಕಾಗುವ ಗಾಯ?
ಕೈಗಾರೀಕರಣ ಜಾಗತೀಕರಣದ ಅಂಧಕಾರದಿ ನೀಡಲಿಲ್ಲ ಅವುಗಳ ಬೇರಿಗೆ ಬೇಕಿದ್ದ ಜಾಗ; ಕಸುವು ಕಳೆದು, ನಿಸರ್ಗದ ಕೋಪಕ್ಕೆ ತುತ್ತಾಗಿ ಅರ್ಪಿಸಿಕೊಳ್ಳುತ್ತಿವೆ ಜೀವವ ಆಗಾಗ!
ಒಂದೆಡೆ ನಿಸರ್ಗದ ಕೋಪ ಇನ್ನೊಂದೆಡೆ ಅಭಿವೃದ್ಧಿಯ ಮಂತ್ರ; ಇವೆರಡರ ಮಧ್ಯೆ ಸಿಲುಕಿ ನಲುಗುತ್ತಿರುವ ಗಿಡ ಮರಗಳಿಗೆ ಎಲ್ಲಿದೆ ಬದುಕುವ ಸ್ವಾತಂತ್ರ?
ನೂರಾರು ವರ್ಷಗಳ ನಿಸ್ವಾರ್ಥ ಬದುಕು ಸಾಗಿಸಿ ನೀಡುವಾಗ ವಿದಾಯ; ಮೋಹದ ಮನುಜನ ತಲೆಯಲ್ಲಿ ಓಡುವದು ಬಿದ್ದ ಮರದಿಂದ ಮತ್ತೇನಿದೆ ಆದಾಯ?
ಅಭಿವೃದ್ದಿಯ ಜಪದಲ್ಲಿ ಕಟ್ಟುತ್ತಿದ್ದೇವೆ ಡಾಂಬರು ಸಿಮೆಂಟಿನ ಕಾಂಕ್ರೀಟ್ ಕಾಡು ಮರಗಳಿಲ್ಲದೆ ಹೊಗೆ ತುಂಬಿದ ಗಾಳಿ ಕಲ್ಮಶ ತುಂಬಿದ ಪರಿಸರದ ಪಾಡು!
ಕಟ್ಟಿಕೊಳ್ಳಲು ನಮ್ಮ ನಮ್ಮ ಗೂಡು ಬಗೆಯುವದು ಬೇಡ ಪರಿಸರಕ್ಕೆ ಕೇಡು; ನಾವು ಬೆಳೆಯುತ್ತಾ, ಬೆಳೆಸೋಣ ಮರಗಳ ಆರೋಗ್ಯಕರ ಜೀವನಕ್ಕೆ ಅವುಗಳೇ ನಮಗೆ ಜೋಡು!
Very well written,
ಸುಂದರ ಆಶಯದ ಕವನ! ಚೆನ್ನಾಗಿದೆ 😊
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
Vidya Shashidhar Moji
Jul 06,2020Very well written,
Chaitra
Jul 06,2020ಸುಂದರ ಆಶಯದ ಕವನ! ಚೆನ್ನಾಗಿದೆ 😊