ಆ ಕ್ಷಣ ಹಗಲಿಗೇ ಇರುಳಿನ ಸ್ಪರ್ಶ ಕತ್ತಲು-ಕಗ್ಗತ್ತಲಿಗೂ ಸಂಘರ್ಷ ಉದಯಿಸಿದಾಕ್ಷಣವೇ ಸೂರ್ಯನೂ ಅಸ್ಥಂಗತ! ಗಾಳಿಯೂ ತಟಸ್ಥ!! ಭೋರ್ಗರೆವ ಕಂಬನಿ ನಿಶ್ಶಬ್ಧದ ಅನುರಣಿ
ಸ್ಮೃತಿ ಗೂ ಅಗೋಚರ ಮೃತಿಯ ಸಂಚಾರ ಹಾ..! ಮಾತಿಗೆ ಮೃತಿಯ ಭೆಟ್ಟಿ ಮೌನಕೆ ಆಘಾತದ ಚಾವಟಿ ಮಾತಿನ ಸಾವು ಮೌನದ ನೋವು! ಮಾತೇನೋ ವಿಲೀನ ಮಡುಗಟ್ಟಿತ್ತು ಮೌನ
ಅಂತೂ ಮೌನದ ಪಟ್ಟಾಭಿಷೇಕವೀಗ ಹಿಗ್ಗುವ ಬದಲು ಕುಗ್ಗಿತು ಮೌನವಾಗ ಹೊರಲಾರದ ಭಾರವು ಆರದ ಬೇಗೆಯ ಕಾವು! ಆರಂಭವಾಯಿತು ಮೌನದಾಳ್ವಿಕೆ ಆದರೂ ಉರಿಯುತಲಿತ್ತು ದುಃಖದ ಅಗ್ಗಿಷ್ಟಿಕೆ
ಕೋಲ್ಮಿಂಚೊಂದು ಸುಳಿಯಿತು ಮಿಂಚಿನ ಹಾದಿಯಲೆ ಮೌನ ಇಣುಕಿತು ಉರಿಯುತಲಿತ್ತಲ್ಲೊಂದು ದೀಪ ಒಡಲಾಳದ ದೀಪ ಪ್ರತಿಧ್ವನಿಸಿತಲ್ಲೆಲ್ಲೋ ಮಾತು ಮನದಾಳದ ಮಾತು ಹಿಂದಿರುಗಿದ ಮೌನ-ಮಾತಿಗೆ ಕಾಯುತಲಿತ್ತು ಭರವಸೆಯಿಂದ ರಾಮನಿಗೆ ಕಾದ ಭರತನ ಹಾಗೆ...
Sometimes the best answer is silence.
Nice.goodluck fr ur future babzz
👌👌
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
Sjree
Jul 06,2020Sometimes the best answer is silence.
Lavanya
Jul 06,2020Nice.goodluck fr ur future babzz
Karan
Jul 06,2020👌👌