ಬಿಸಿಲಿನ ತಾಪಕೆ ಮರೆಯಾಗಿಹ ಮೋಡವೇ ಸ್ವಚ್ಛಂದ ಆಗಸವ ಆವರಿಸುತ ಬನ್ನಿ ಹನಿಗಾಗಿ ಕಾದಿಹ ಭುವಿಯ ತಂಪೆರೆಸಲು ಬನ್ನಿ ಬಿರುಸಾಗಿ ಬನ್ನಿ ನವಚೈತನ್ಯವ ಹರಸುತ ತನ್ನಿ!!
ಗಾಳಿಯ ಸೂಸುತ ತಂಪನು ಚೆಲ್ಲುತ ಹಸಿರ ಕಾಂತಿಗೆ ಹೊಳಪನು ತನ್ನಿ ಕೃಷಿಕನ ಬಾಳಲ್ಲಿ ಸಂತೃಪ್ತಿ ತರಲು ಮೋಡದಿ ಹನಿಯಾಗಿ ಇಳೆಗೆ ಬನ್ನಿ!!
ಮೇವಿಗಾಗಿ ಕಾದಿಹ ಮೂಕಪ್ರಾಣಿಗಳಿಗೆ ಅವುಗಳ ಒಡಲನು ತೃಪ್ತಿಪಡಿಸಲು ಬನ್ನಿ ಆಕಾಶದಿ ನಿನ್ನನೇ ದಿಟ್ಟಿಸಿ ನೋಡುತ ಕುಳಿತ ರೈತನ ಮೊಗದಿ ಸಂತಸ ತರಲು ಬನ್ನಿ!!
ಪ್ರಕೃತಿ ಸೌಂದರ್ಯ ಸೊಬಗ ಹೆಚ್ಚಿಸಲು ಬತ್ತಿದ ಕೆರೆ ಕಟ್ಟೆಗಳು ತುಂಬಲು ಬನ್ನಿ ಖಗ ಮೃಗಗಳಿಗೆ ದಾಹ ತೀರಿಸಲು ಬನ್ನಿ ಬನ್ನಿ ಮಳೆಹನಿಹನಿಯಾಗಿ ಬನ್ನಿ!!
ಜೀವ ಮತ್ತು ಪ್ರಕೃತಿಯ ಸಂಬಂಧ ಬೆಸೆಯುವ ಈ ಕವನ ಸೊಗಸಾಗಿದೆ
ಸೂಪರ್ ಇನ್ನು ಹೆಚ್ಚು ಹೆಚ್ಚು ಕವಿತೆ ಗಳನ್ನು ಬರೆದು ದೊಡ್ಡ ವ್ಯಕ್ತಿ ಆಗು... ಸ್ನೇಹಿತ ಶುಭವಾಗಲಿ
Kannada padagala balake thumba chennagide e kaavyadalli.
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
ವೀರೇಶ್ ಮಲ್ಲಿಕಾರ್ಜುನ್
Jul 08,2020ಜೀವ ಮತ್ತು ಪ್ರಕೃತಿಯ ಸಂಬಂಧ ಬೆಸೆಯುವ ಈ ಕವನ ಸೊಗಸಾಗಿದೆ
Rರಾಜೇಶ್
Jul 06,2020ಸೂಪರ್ ಇನ್ನು ಹೆಚ್ಚು ಹೆಚ್ಚು ಕವಿತೆ ಗಳನ್ನು ಬರೆದು ದೊಡ್ಡ ವ್ಯಕ್ತಿ ಆಗು... ಸ್ನೇಹಿತ ಶುಭವಾಗಲಿ
Ravindra
Jul 06,2020Kannada padagala balake thumba chennagide e kaavyadalli.