ಮೌನ ಮುರಿದ ಮಡಿಕೆ ಮಣ್ಣೆಂಬರು, ಮರುಳರು ಕಾಯ ಮೂಲ ದ್ರವ್ಯವ ಕರ್ಮ ಸಕಲ ಮರ್ಮವ ತಪ್ಪಲಲ್ಲಿ ತೊಯ್ದು ಇದ್ದೆ ಹದಕೆ ಬಂದು ಹುದುಗಿದೆ …….. ………...…….. ನನ್ನ ಬಯಸಿ ಬಂದ ಶ್ರಮಿಕ ಹದವ ಮಾಡಿ ಜರಡಿ ಹಿಡಿದು ನೀರ ಬೆರಸಿ ಬೆವರ ಸುರಿಸಿ ಮಣ್ಣ ಮಡಿಕೆ ಮಾಡಿದ…… …………… ಸುಟ್ಟನಲ್ಲ ಕೆಂಡದಿಂದ ಪೂರ್ಣವಾಗಿ ಬೆಯ್ಯಲೆಂದ ನಾನು ಸುಟ್ಟೆ ಕಮರಿ ಹೋದೆ ಹೊರಗೆ ತಗೆದ ಮೂಲೆಗೆಸೆದ ಅರ್ಧ ಬೆಂದ ಮಡಿಕೆ ಎಂದ…………. …………… ಹಡೆದವನೆ ಬೇಡವೆಂದ ಮರುಹುಟ್ಟು ಪಡೆದು ಬಂದೆ ಗಡಿಯ ದಾಟಿ ಗಡಿಗೆಯಾದೆ ಮಡಿಯ ದಾಟಿ ಮಡಿಕೆಯಾದೆ………… …………… ಅರವಿ ಗಡಿಗೆ ಕುಡಿಕೆಯಾದೆ ನೀರು ಸಾರು ತುಂಬಿಕೊಂಡೆ ಬಡವನೊಡಲ ಹಸಿವ ತಣಿಸಿ ಅವನ ಎದೆಯ ಮಣಿಸಿ ಗುಡಿಸಲಲ್ಲಿ ನೆಲೆಗೆ ನಿಂತೆ…….. …………… ಉಳ್ಳ ಜನ ನನ್ನ ಕಂಡು ಮನೆಯ ಹೊರಗೆ ನಿಲ್ಲು ಎಂದು ಉಕ್ಕ ಅರಸಿ ತುಕ್ಕ ಹಿಡಿದು ನನ್ನ ತುಚ್ಛ ಕಂಡರು ಮತ್ತೆ ಬಳಿಗೆ ಬಂದು ನಿಂದು ಅಪ್ಪ ಸತ್ತನೆಂದು ನೊಂದು ಕುಳೂ ಬೇಸು ಎಂಬರು………..
Latest Comments
R.PRABHUDEV-G
Jul 11,2020ವಾವ್ ಸೋ ನೈಸ್ 👌🌹👌 ತುಂಬಾ ಚೆನ್ನಾಗಿದೆ
Hanumanthapparayappa
Jul 09,2020Good imagination
Chandrakanth
Jul 06,2020Super