ಮನುಸ್ಮೃತಿಗೆ ಸೆಡ್ಡೊಡೆದ ಮಾನವತಾವಾದಿ
ಬಾಯಿಲ್ಲದ ಜನಗಳ ಪರ ನಿಂತ ಮೂಕನಾಯಕ
ಬಹಿಷ್ಕೃತ ಭಾರತದ ಹಿತ ಕಾಯ್ದ ಭಾರತೀಯ
ಜೈ ಭೀಮ ನಿನಗಿದೋ ಎನ್ನ ನಮನ
ವೇದ ಕೇಳಿದ ಅಸ್ಪ್ರಶ್ಯ ಕಿವಿಗೆ ಸೀಸ ಹುಯ್
ಎಂದವರ ಮುಂದೆ ಪಾಶ್ಚಿಮಾತ್ಯಕೆ ಹೋಗಿ
ಸಾಲು ಸಾಲು ಡಿಗ್ರಿ ಪಡೆದ ಅಸಾಮಾನ್ಯ ಡಾಕ್ಟರ್
ಜೈ ಭೀಮ ನಿನಗಿದೋ ಎನ್ನ ನಮನ
ಮುಟ್ಟಬೇಡ, ದಾರಿಯಲಿ ನಡೆಯಬೇಡ, ನೀರು ಕೊಡೆವು
ಗಾಡಿಯಲಿ ಕೂರಬೇಡ, ಓದಬೇಡ, ಬರೆಯಬೇಡ, ನೋಡಬೇಡ
ಇಂತಹ ನೂರಾರು ಬೇಡಗಳನು ಸ್ವಾಭಿಮಾನದಿಂ ಮೆಟ್ಟಿದ
ಜೈ ಭೀಮ ನಿನಗಿದೋ ಎನ್ನ ನಮನ
ಭರತ ಹಿಂದೂ ಧರ್ಮ ವೈದಿಕರ ಅಡಿ ನರಳೆ
ಪಂಡಿತ ತಾನಾದರೂ ಜಾತಿ ಹಿಡಿದು ಮೂದಲಿಸೆ
ಹಿಂದೂ ಕವಲಕುಡಿ ಹಿಡಿದು ಮೇಲೆದ್ದ ದಮ್ಮ ಮೂರ್ತಿ
ಬುದ್ಧಂ ಶರಣಂ ಗಚ್ಛಾಮಿ ಎಂದ
ಜೈ ಭೀಮ ನಿನಗಿದೋ ಎನ್ನ ನಮನ
ನನ್ನ ಅಂಬೇಡ್ಕರನೇ ಇಲ್ಲಿ ಕೇಳು
ಬಹುದೂರ ಸಾಗಬೇಕಿದೆ ಇನ್ನೂ ನಾವು
ಎಲ್ಲ ಶೂದ್ರರಿಗೂ ನ್ಯಾಯ ಸಿಕ್ಕಿಲ್ಲ
ಎಲ್ಲ ಮಹಿಳೆಯರು ಸ್ವತಂತ್ರರಾಗಿಲ್ಲ
ಭೀಮಶಕ್ತಿಯನು ನಮ್ಮೊಳು ತುಂಬು
ಜೈ ಭೀಮ ಕೈ ಹಿಡಿದು ಎಮ್ಮ ನಡೆಸು
By: ರೇಣುಕಾ ಚಿತ್ರದುರ್ಗ
Share On
Comments[6] Likes[29] Shares[2]
Submit Your Comment
Latest Comments
satisha j jajuru(sajala)
Jul 21,2020
ಕವಿತೆ ತುಂಬಾ ಅನುಭವಜನ್ಯವಾಗಿದೆ. ಸಾಮಾನ್ಯ ಮಾತುಗಳಿಗೆ ಭಾವನೆಗಳ ಸುವರ್ಣ ಚೌಕಟ್ಟು ನಿಂದ ಕವಿತೆಯನ್ನು ಕಟ್ಟಲಾಗಿದೆ . ಕಲಿಯದವರೂ ಕಾಮಧೇನುವಂತೆ ಕವಿತೆ ಒಲಿಯುವಂತಿದೆ.
ಅಲುಮೇಲು ವಿನೋದ್
Jul 21,2020
ತುಂಬಾ ಚೆನ್ನಾಗಿದೆ... 👏👏💐
Jayanth
Jul 21,2020
Revolutionary poem...
Venugoall
Jul 21,2020
Nice artical, Definatly if been tribute to our Constitution architect Babasaheb❤️
Renuka
Jul 21,2020
❤️
shivashankarr86@gmail.com
Jul 08,2020
ಕವಿತೆಯ ಆಶಯ ಚೆನ್ನಾಗಿದೆ
ಆದರೆ ಕವಿತೆ ಕಾವ್ಯ ಭಾಷೆಗೆ ಇನ್ನಷ್ಟು ಒಡ್ಡಿಕೊಳ್ಳಬೇಕಿತ್ತೆನಿಸಿತು.
Latest Comments
satisha j jajuru(sajala)
Jul 21,2020ಕವಿತೆ ತುಂಬಾ ಅನುಭವಜನ್ಯವಾಗಿದೆ. ಸಾಮಾನ್ಯ ಮಾತುಗಳಿಗೆ ಭಾವನೆಗಳ ಸುವರ್ಣ ಚೌಕಟ್ಟು ನಿಂದ ಕವಿತೆಯನ್ನು ಕಟ್ಟಲಾಗಿದೆ . ಕಲಿಯದವರೂ ಕಾಮಧೇನುವಂತೆ ಕವಿತೆ ಒಲಿಯುವಂತಿದೆ.
ಅಲುಮೇಲು ವಿನೋದ್
Jul 21,2020ತುಂಬಾ ಚೆನ್ನಾಗಿದೆ... 👏👏💐
Jayanth
Jul 21,2020Revolutionary poem...
Venugoall
Jul 21,2020Nice artical, Definatly if been tribute to our Constitution architect Babasaheb❤️
Renuka
Jul 21,2020❤️
shivashankarr86@gmail.com
Jul 08,2020ಕವಿತೆಯ ಆಶಯ ಚೆನ್ನಾಗಿದೆ ಆದರೆ ಕವಿತೆ ಕಾವ್ಯ ಭಾಷೆಗೆ ಇನ್ನಷ್ಟು ಒಡ್ಡಿಕೊಳ್ಳಬೇಕಿತ್ತೆನಿಸಿತು.