Poem

ವಿಸ್ಮಯ

        ಕಳೆದುಹೋಗಿದೆ ನನ್ನಯ ಮನವು
        ಆಗಸದ ಮೌನ ಮೃದಂಗಕ್ಕೆ
        ಸಾಗರದ ಅಲೆಯ ಭೀಕರತೆಗೆ..

        ಸೋತುಹೋಗಿದೆ ನನ್ನಯ ತನುವು
        ಚಂದಿರನ ಈ ತಿಳಿ ನಗೆಗೆ
        ಕಾರ್ಮೋಡದ ಈ ಪರಿ ನಡೆಗೆ..
 
        ತನ್ಮಯವಾಗಿದೆ ನನ್ನಯ ಮನವು
        ಕೋಗಿಲೆಯ ಇಂಪಾದ ವಾಣಿಗೆ
        ಕೋಗಿಲೆಯ ಸುಮಧುರ ಕಂಪಿಗೆ..

        ಹಸಿರಾಗಿದೆ ನನ್ನಯ ಹೃದಯ
        ಹನಿ ಮಳೆಯ ತಂಪಿಗೆ
        ಕಮಲ ಅರಳುವ ಪರಿಗೆ..

        ನಲಿದಾಡಿದೆ ನನ್ನಯ ಮೊಗವು
        ಗರಿಗೆದರಿದ ನವಿಲ ನೃತ್ಯಕ್ಕೆ
        ಸೂರ್ಯನ ಬೀಳ್ಕೊಡುಗೆಯ ಪರಿಗೆ.. 
 

By: ಶ್ರೇಯ ವಿ ಉಪಾಧ್ಯಾಯ

Comments[1] Likes[3] Shares[1]

Submit Your Comment

Latest Comments

upadhyarajVadi
Jul 06,2020

Super 👍👏