Poem

ಯಾರಿದು?

              ಯಾರಿದು?
ಎದೆಯೊಳಗೆ ತಾಂಡವ ಆಡಬೇಡ
ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು
ಬೆನ್ನತ್ತ ಬೇಡ ಎಲ್ಲರಂತಿರಲು ಬಿಡು
ನೀ ಯಾರೆಂದು ಒಮ್ಮೆ ಹೇಳಿಬಿಡು.
                 ನೀ ಮನಹೊಕ್ಕಿದಾಗ ಶರಣಾದ
                 ಮನವು ಮಗುವಂತೆ ಆಯಿತೇಕೆ?
                 ಒಟ್ಟೊಟ್ಟಿಗೆ ಖುಷಿ ದುಃಖವೇಕೊ? 
                 ಮನಕ್ಕೆ ಹೊಸ ಸಂಚಲನವೇಕೊ? 
ಮನದೊಳಗೆ ಯಾಕಿಷ್ಟು ಪದಗಳ
ಸುಗ್ಗಿ,ನಾನೊಬ್ಬ ಸೋಮಾರಿಗಳ
ಸೋಮಾರಿ,ನನ್ನಯ ಮನದಂಗಳ
ಅರಿದಗೋಣಿ,ನಿನಗೇನು ಕೆಲಸವಲ್ಲಿ.
                     ಜ್ಞಾನಸಾಗರದಲ್ಲಿ ಈಜುವ ಬಯಕೆ
                     ಇಲ್ಲದವ ನಾನು,ನನ್ನಂತವನ ಬಳಿ
                     ನಿನ್ನಯ ರುದ್ರನರ್ತನವೇಕೊ ಕಾಣೆ, 
                     ಹೋಗು ಜ್ಞಾನ ಕರಗತವಾದವರ ಬಳಿ. 
ನೀನು ಕೊಡುವ ಬಾಧೆಯ
ನಾ ತಾಳಲಾರೇ,ಬಾಗಿಲೆಲ್ಲಾ
ಮುಚ್ಚಿದ್ದರು ಒಳನುಸುಳುವೇ
ಹೇಗೆಂಬ ಅರಿವು ನನಗಿಲ್ಲವಲ್ಲ. 
                                               
                   

By: ಯೋಗಾನಂದ ಎನ್ ಬಿ

Comments[0] Likes[6] Shares[0]

Submit Your Comment

Latest Comments

No comments are available!