ಸ್ವತಃ ಲೇಖಕಿಯಾಗಿರುವ ಅಕ್ಷತಾ ಹುಂಚದಕಟ್ಟೆ ಅವರು 2008ರಲ್ಲಿ ಆರಂಭಿಸಿದ ಪುಸ್ತಕ ಪ್ರಕಟಣಾ ಸಂಸ್ಥೆ ಅಹರ್ನಿಶಿ ಪ್ರಕಾಶನ. ಜನಪರವಾದುದಕ್ಕಿಂತ ಭಿನ್ನವಾಗಿ ಬರೆಯುವ ಸಮಕಾಲೀನ ಬರಹಗಾರರ ಕೃತಿಗಳನ್ನು ಬೆಳಕಿಗೆ ತರುವ ಅಗತ್ಯವನ್ನು ಮನಗಂಡು ಅವರಿದನ್ನು ಆರಂಭಿಸಿದರು.
ಒಂದೆಡೆ ಹಿರಿಯ ಬರಹಗಾರರ ಕೃತಿಗಳನ್ನು ಪ್ರಕಟಿಸುವುದರ ಜೊತೆಗೇ, ಹೊಸ ಲೇಖಕರನ್ನು ಗುರುತಿಸಿ ಅವರ ಕೃತಿಗಳನ್ನು ಪ್ರಕಟಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಅಹರ್ನಿಶಿ ಪ್ರಕಾಶನ. ಈ ಪ್ರಕಾಶನದ ಹಲವಾರು ಕೃತಿಗಳು ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಸೇರಿದಂತೆ ಹಲವು ಗೌರವಗಳಿಗೆ ಪಾತ್ರವಾಗಿವೆ.
ಕಡಿದಾಳು ಶಾಮಣ್ಣನವರ ಆತ್ಮಕಥನ ಕಾಡುತೊರೆಯ ಜಾಡು, ಪುರುಷೋತ್ತಮ ಬಿಳಿಮಲೆಯವರ ಕಾಗೆ ಮುಟ್ಟಿದ ನೀರು, ನೀರ ಮೇಲಣ ಚಿತ್ರ, ಗಾಯಗೊಂಡವರಿಗೆ, ರಸ್ತೆ ನಕ್ಷತ್ರ ಸೇರಿದಂತೆ ಹಲವು ಕೃತಿಗಳು ಪ್ರಶಸ್ತಿ ಪಡೆದಿವೆ. ಸಾಂಸ್ಕೃತಿಕ ವಲಯದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿರುವ ಪ್ರಕಾಶನ ಸಂಸ್ಥೆ ಇದು.
©2024 Book Brahma Private Limited.