Poem

ದೇವ್ರ ಅರಮನಿ

ತವಿಮ್ಯಾಲಿನ್ ಶೇಂಗಾ
ಚೊಲೊತಂಗ ಹುರಿಬೇಕಂದ್ರ
ಗಟ್ಟಿ ಮೊಸರ್ ನೀರಿನ ಜೊತಿ
ಸೇರಿ ಹದವಾಗಿ ಮಜ್ಜಿಗ್ಯಾಬೇಕಂದ್ರ
ಬೀಜ ಭೂಮ್ಯಾಗ ಮೊಳತ
ನೀರ್, ಬಿಸಿಲ ನುಂಗಿ
ಚೆಂದಂದ ಗಿಡ ಆಗಬೇಕಂದ್ರ
ಬ್ಯಾಸರಸದ ಕಾಯಬೇಕ

ಹಿರ್ಯಾರ ಹೇಳಿದ್ದ ಮಾತ
ಐತಿ ಸರಿ, ತಕರಾರಿಲ್ಲ
ಕೊಡತದ ಫಲ ಕಾಯೋದ,
ಅವಸರದ ಬೇಡಿಕಿ, ದೇವ್ರ
ಅರಮನ್ಯಾಗ ಕೇಳಿಸಲ್ಲ ಜಾಸ್ತಿ,
ಪಾಳೆ ಬಂದಾಗ ಸಿಗೋದ್
ಕಣ್ಣ ತಗದ ಕಣ್ಣಿಂದ ಆಶೀರ್ವಾದ

ಏ ಪ್ಯಾಲಿ ಖರೆ ಇರಲ್ಲ ಕಾಯೋದ
ಸಿಗತದಂತ ಸಿಹಿ, ಬೇಡಿದ್ದ
ಒಲ್ಯಾಂಗಿಲ್ಲ ಒಮ್ಮೆಮ್ಮಿ ಹೂ
ಇರಂಗಿಲ್ಲ ವರ್ಷದ ಹಿಂದ
ಹಚ್ಚಿದ ಗುಲಾಬಿ ಗಿಡಕ್ಕ,
ಹೊತ್ತಿದ ಶೇಂಗಾ, ಸ್ವಾದ ಇಲ್ಲದ್ದ
ನೀರ ಮಜಗಿ ಕಂಡೆನಿ
ಜಾಸ್ತಿ ಆತ ಕಾದದ್ದ ಅಂತ ಬಡ್ಡಿ
ಸಮೇತ ಸುಖ ಕೊಡೋದ
ದೇವ್ರ ಅರಮನ್ಯಾಗ ನಿಷಿದ್ಧ

ಒಮ್ಮೊಮ್ಮಿ...‌

ಮಾಲಾ ಮ. ಅಕ್ಕಿಶೆಟ್ಟಿ

ಕವಯತ್ರಿ ಮಾಲಾ ಮ. ಅಕ್ಕಿಶೆಟ್ಟಿ ಮೂಲತಃ ಬೆಳಗಾವಿಯವರು. ವೃತ್ತಿಯಿಂದ ಉಪನ್ಯಾಸಕಿ. ಅವರ ಹಲವಾರು ಕವಿತೆ, ಕತೆ, ಲೇಖನ, ಮಕ್ಕಳ ಕತೆ, ಲಲಿತ ಪ್ರಬಂಧಗ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

More About Author