ಮೆಟ್ಟಿ ನಿಂತೆ ಮುಟ್ಟ ಜಗದಿ ಜೀವಿಯ ಸೃಷ್ಟಿಸಲು ಮನದ ಒಡಲಲ್ಲಿ ಕುದಿವ ರಕ್ತ ಕಣಗಳ ಹೋರಾಟದ ಕಷ್ಟ ನೋವು ಮರೆಯಲು ಮರೆತು ಮಾತ ಮುರಿಯಲು
ಮೆಟ್ಟಿ ನಿಂತೆ ಮುಟ್ಟ ಬಾಹು ಬಂಧನದಿ ಬಂಧಿಯಾಗಿ ಹಿಂಸೆಯ ಪ್ರೀತಿ ಪ್ರೇಮ ನೀಡುತ ಇಬ್ಬರ ಆಲಿಂಗನದಿ ಜನಿಸಿದ ಕುವರನ ಕೈ ಎತ್ತಿ ಆಡಿಸಲು
ಮೆಟ್ಟಿ ನಿಂತೆ ಮುಟ್ಟ ಹರಿವ ಜಲಪಾತದ ಮೇಲೆ ಬೆಂಕಿ ಉಲ್ಕೆಗಳ ಆರ್ಭಟವಾಗಿ ಕರಳು ಕಿವುಚಿದರು ಮತ್ತೆ ನಗಲು ನಕ್ಕು ಎಲ್ಲರೊಂದಿಗೆ ಬೆರೆಯಲು
ಮೆಟ್ಟಿ ನಿಂತೆ ಮುಟ್ಟ ಋತುಮಾನದ ಋತುವಿನಲಿ ಸಹಿಸದೆ ನೋವಲಿ ಮಡಿಲು ರಕ್ತಪಾತವಾದರೂ ಸ್ವರ್ಗದಿ ಮುಕ್ತಿ ಪಡೆಯಲು ಮೆಟ್ಟಿ ನಿಂತೆ ಮುಟ್ಟ ಮೆಟ್ಟಿ ನಿಂತೆ ಮುಟ್ಟ
- ಕಿರಣ ಡಿ ಕಳಸಾ ಗುಡೂರ
ಕವಿ ಕಿರಣ ಡಿ. ಕಳಸ ಅವರು ಮೂಲತಃ ಬಾಗಲಕೋಟ ಜಿಲ್ಲೆಯ ಗುಡೂರ ಗ್ರಾಮದವರು. ಪ್ರಸ್ತುತ ಕೋ ಅಪ್ ಕ್ರೆಡಿಟ್ ಸೊಸೈಟಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕವಿತೆ, ಬರಹಗಳು ವಿವಿಧ ಪತ್ಕಾರಿಕೆಗಳಲ್ವ್ಯಲಿ ಬೆಳಕು ಕಂಡಿವೆ.
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.