Poem

ತೋಟದಲ್ಲಿ

ಹೇಗೆ ಕೂಡಿದವು
ಹಸಿರೆಲೆ ಹೀಗೆ ಹಳದಿಯೆಲೆ ಜೊತೆ
ಆಶ್ಚರ್ಯ ಚಿಗುರುಗಳಿಗೆ

ಹಸಿರೆಲೆಗಳ ನಡುವೆ
ಒಬ್ಬೊಂಟಿ ಹಳದಿ ತಿರುಗಿ ಕೊನೆಗೆ ಕಾಯುವುದು
ಮಪ್ಪು ತೀರಾ ಕಷ್ಟ

ಮಾಗಿ ಬಿಸಿಲಲ್ಲಿ
ಹಳದಿ ಹೂ, ಹಳದಿ ಚಿಟ್ಟೆ, ಒಂದೋ ಎರಡೋ
ಕಷ್ಟ ಹೇಳುವುದು

ವಿದೇಶೀ ಕಣಿವೆಯಲ್ಲಿ
ನಾ ಕಿತ್ತ ಪುಟ್ಟಕೆಂಪು ಹೂ ನಾಳೆ
ಬಾಡುವುದೆ ತಾಯ್ನಾಡಲ್ಲಿ?

- ಎಚ್.ಎಸ್. ಶಿವಪ್ರಕಾಶ್

ವಿಡಿಯೋ
ವಿಡಿಯೋ

ಎಚ್.ಎಸ್. ಶಿವಪ್ರಕಾಶ್

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ನೆಲದಲ್ಲ, ಮಿಲರೇಪ, ಅಣುಕ್ಷಣ ಚರಿತೆ, ಸೂರ್ಯಜಲ, ಮಳೆಯೇ ಮಂಟಪ. ಅವರ ಅನುವಾದಿತ ಕೃತಿ- ಕಿಂಗ ಲಿಯರ್ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. 

More About Author