ಎದೆಯ ನೆತ್ತರಿನಲ್ಲಿ
ಬರೆದುಕೊಳ್ಳುತ್ತೇವೆ.
ನಮ್ಮ ಹೋರಾಟದ ಜಯವನ್ನು.
ಏಕೆಂದರೆ.
ಇದು ಈ ನೆಲದ
ಅನ್ನದ ಜಯ.
ಆದರೂ
ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ.
ಸಾವಿರ ಸಾವಿರ ಅನ್ನದಾತರ
ಬದುಕು, ಬಲಿದಾನವನ್ನು.
ಈಗಲಾದರೂ ಹೇಳಿ.
ನಿಮ್ಮ ಲಾಠಿ,ಬೂಟು,
ಬಂದೂಕು, ಜಲ ಫಿರಂಗಿಗಳಿಗೆ....
ಸೋಮವಾರ, ಬುಧವಾರ, ಶನಿವಾರ
ಆ ಗಲ್ಲಿಯಲ್ಲಿ ತರಕಾರಿ ಹೆಸರು
ಕೂಗುತ್ತಿದ್ದ ಮೌಲವ್ವನ ಧ್ವನಿ,
ಈಗ ನಮ್ಮ ಗಲ್ಲಿಗೂ ಕೇಳುತ್ತಿಲ್ಲ!
ಗುರುವಾರ ಬಂದರೆ ಸಾಕು ರಾಯರ
ಮಠದ ಸುತ್ತ ದುಂಡು ಮಲ್ಲಿಗೆ ಘಮಘಮ.
ಮೊಳಕ್ಕೆ ಐದು ರೂಪಾಯಿಯೆಂದು ಕೂಗುತ್ತಿದ್ದ,
ರಾಧಕ್ಕನ ಧ್ವನಿಯೂ ಕೇಳುತ್ತಿಲ್ಲ!
...