Story/Poem

ಸತೀಶ್ ಜವರೇಗೌಡ

ಬಹುಮುಖ ಪ್ರತಿಭೆಯ ಸಾಹಿತಿ ಟಿ. ಸತೀಶ್ ಜವರೇಗೌಡ ಮಂಡ್ಯ ನೆಲದ ಅಪ್ಪಟ ದೇಸಿ ಪ್ರತಿಭೆ. ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮ ಹುಟ್ಟೂರು. ತಾಯಿ ಮಂಚಮ್ಮ, ತಂದೆ ಎಂ.ಜೆ. ತಿಮ್ಮೇಗೌಡ. ಎಂ.ಎ.. ಬಿ.ಇಡಿ. ಪದವೀಧರರು. ವೃತ್ತಿಯಲ್ಲಿ ಕ್ರಿಯಾಶೀಲ ಶಿಕ್ಷಕರಾಗಿ ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು 'ಕಾವ್ಯ' ಪ್ರಕಾರದಲ್ಲಿ ಜೀವನ್ಮುಖಿ, ಹೊಳೆ ಜಂಗಮನ ಜೋಳಿಗೆ, ಸಂಜೆ ಮಳೆ, ಗಾಳಿಪಟ, ಕುಹೂ ಕುಹೂ ಕೋಗಿಲೆ, ದಿವ್ಯ ದೀವಿಗೆ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಕಾವ್ಯಸಿರಿ, ಸೇವಾಚೇತನ, ವಿಜ್ಞಾನ ಪಥಿಕ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಮೂರು ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಮತ್ತು ಎರಡು ಬಾರಿ ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಇವರ ಎರಡು ದಶಕದ ಬಹುಮುಖ ಕ್ಷೇತ್ರದ ಸೇವಾ ಸಾಧನೆಗಾಗಿ ಸರ್ವಜ್ಞ ಕಾವ್ಯ ಪ್ರಶಸ್ತಿ, ಡಾ.ಜಿ.ಪಿ. ರಾಜರತ್ನಂ ಸಾಂಸ್ಕೃತಿಕ ಪ್ರಶಸ್ತಿ, ಪ್ರತಿಭಾ ಸಾಹಿತ್ಯ ಪ್ರಶಸ್ತಿ, ಡಾ. ನಲ್ಲೂರು ಪ್ರಸಾದ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಗಾಂಧೀ-ವಿವೇಕಾನಂದ ಸದ್ಯಾವನ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ, ಕುವೆಂಪು ಸಾಹಿತ್ಯ ಪ್ರಶಸ್ತಿ, ಡಾ.ಎಸ್.ಕೆ. ಕರೀಂಖಾನ್ ಸಾಂಸ್ಕೃತಿಕ ಮತ್ತು ಸಾಹಿತ್ಯ ಪ್ರಶಸ್ತಿ, ಕಾವ್ಯಶ್ರೀ ಪ್ರಶಸ್ತಿ, ರೋಟರಿ ಆದರ್ಶ ಶಿಕ್ಷಕ ಪ್ರಶಸ್ತಿ, ನೌಕರರ ಸೇವಾರತ್ನ ಪ್ರಶಸ್ತಿ, ಕನ್ನಡ ಚೇತನ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರಿಗೆ ಸಂದಿವೆ.

More About Author

Story/Poem

ಬಯಲ ಬೆಳಕಿಗೆ ಬಾಗಿ 

ಎದೆಯೊಳಗೆ ಧಗಧಗಿಸುವ ಕಾಡ್ಗಿಚ್ಚು ಕಾಣೆಯಾಗಿವೆ ನಂದಿಸುವ ಮೋಡಗಳು ಬತ್ತಿಹೋಗಿವೆ ಭುವಿಯ ಮೇಲಿನ ನೀರಿನೊರೆತೆಗಳು ಮಾಡಿನ ಸನಿಹದಲ್ಲೇ ಹಾರಾಡುತ್ತಿವೆ ರಣಹದ್ದುಗಳು ನಡುಹಗಲೇ ಮನುಷ್ಯತ್ವದ ಕೊಲೆಯಾಗಿರಬೇಕು   ಕತ್ತರಿಸುವ ಕೊಡಲಿ ಕುಯ್ಯುವ ಗರಗಸ ಅಬ್ಬರಿಸುತ್ತಲೇ...

Read More...