Story/Poem

ವಿಕಾಸ್ ಆರ್ ಮೌರ್ಯ

ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಹಳ್ಳಿ. ಬೆಳೆದದ್ದು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳ ಸಂಗ್ರಹ ‘ಚಮ್ಮಟಿಕೆ’ ಕೃತಿಯನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಜೊತೆಗೆ ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಕಪ್ಪು ಕುಲುಮೆ'ಯನ್ನೂ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.  ಹಾಗೇ 'ನೀಲವ್ವ' ಎಂಬ ಕತಾಸಂಕಲನ ಹಾಗೂ 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು' ಎಂಬ ಅನುವಾದಿತ ಕೃತಿ ಹಾಗೂ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯನ್ನು 'ಅಂಬೇಡ್ಕರ್ ಜಗತ್ತು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಜೀರುಂಡೆ ಪುಸ್ತಕ ಪ್ರಕಾಶನ ಪ್ರಕಟಿಸಿದೆ. ಇವರ ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಬರೆದ ಬುದ್ಧಬೆಳಕು ನಾಟಕ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಕರ್ನಾಟಕದಲ್ಲಿ ಕೋಮವಾದದ ವಿರುದ್ಧ ನಡೆದ ಬಹುಮುಖ್ಯ ಚಳುವಳಿ ಚಲೋ ಉಡುಪಿಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ದಲಿತ ಸಂವೇದನೆಯನ್ನು ಅಕ್ಷರಮುಖಿ ನಿರ್ವಚನದ ಆಚೆಗೂ ಪಡಿಮೂಡಿಸುತ್ತಿದ್ದಾರೆ.

More About Author

Story/Poem

ಚಂಪಾ

ಚಂಪಾ ಚಂಪಾಕಲಿ ಅಲ್ರಿ ಚಂಪೆ‌ ಮ್ಯಾಲಿನ‌ ಕೆಂಪುರಿ ಮುಖದ ಮ್ಯಾಗಳ ಬೆವರ್ರಿ ಮಾವಿನೊಳಗಿನ ಸಿಹಿರ್ರಿ ಬಜ್ಜಿ ಗಿರ್ಮಿಟ್ ಮೆಣ್ಸಿಕಾಯ್ ಬಾಯಾಗ್ ಬಿದ್ದಾಂಗ ಕಾರ ಚಪ್ಪರ್ಸಿ ಬಿಟ್ಟಾಂದ್ರ ಮುಗೀತ್ರಿ ಖರೆ ಸಂಕ್ರಾಂತಿ ಸಂಕ್ರಮಣ ಮುಂಜಾನಿ ಮುಂಗಾರು ಹಗಲೆಲ್ಲಾ ತುಂತುರು ...

Read More...

ತಮಟೆಯ ಹಾಡು

ತಮಟೆ ತೊಗಲ ತೀಡಿ ತೀಡಿ ತಮಟೆ ದನಿಯ ಹೊಸತು ಮಾಡಿ ಜಗದ ಜಡವ ಸಾರಿದೆ ಬೆವರ ತಾಪ ಸೋಕಿದೆ ಮೋಡ ತಾರೆ ಗ್ರಹಗಳಲ್ಲಿ ಮುತ್ತು ರತ್ನ ಉದುರುತಿರಲು ರೆಟ್ಟೆ ಹೊಟ್ಟೆ ಬೆವರ ಜೊತೆಗೆ ಕುಳಿತುಕೊಂಡೆ ಮಾತಿಗೆ ಒಡಲತುಂಬ ಕಾವ್ಯ ಕಟ್ಟೆ ನದಿಗಳಲ್ಲಿ ಹರಿಯಬಿಟ್ಟೆ ಕನಸು ತೇಲಿ ಮೂಟೆಗಟ್ಟೆ ಬ...

Read More...

ಎರಡು ಕವಿತೆ

ದಲಿತ ನಾನು ದಲಿತ ;ಆತ್ಮವಿಲ್ಲದವನು ಹೃದಯ ಹೊತ್ತ ಅಲೆಮಾರಿ ಚಾತುರ್ವರ್ಣಕ್ಕೆ ಸಿಲುಕದ ಅವರ್ಣೀಯ ನಿಮ್ಮನುಭವಕ್ಕೆ ನಿಲುಕದ ಮಳೆಬಿಲ್ಲು ಬಾಯಿ ಭುಜ ತೊಡೆ ಪಾದಗಳಲ್ಲ ಯೋನಿ ನನ್ನ ಜನ್ಮಸ್ಥಳ ಪುರುಷನ ಸೂಕ್ತಕ್ಕೆ ಬಲಿಯಾಗದೆ ಅವ್ವನೊಂದಿಗೆ ಉಸಿರಾಡಿದವನು ಆ ಭಿಕ್ಕು ಅಪ್ಪಿದ ಘಮಲು...

Read More...