ಅಜಿತ ಹೆಗಡೆ
ಅಜಿತ್ ಹೆಗಡೆ ಅವರು ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಪದವಿ ಪಡೆದಿದ್ದಾರೆ. ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಎಂ.ಡಿ. ಪಡೆದಿರುವ ಅವರು ವೈದ್ಯರಾಗಿ ಸೊರಬದಲ್ಲಿ ನೆಲೆಸಿದ್ದಾರೆ. ’ಪರಿಧಾವಿ’ ಎಂಬ ಕಥಾಸಂಕಲನ , ಬಿಳಿಮಲ್ಲಿಗೆಯ ಬಾವುಟ ಮತ್ತು ಸೂರು ಸೆರೆಹಿಡಿಯದ ಹನಿಗಳು ಅವರ ಪ್ರಕಟಿತ ಪುಸ್ತಕಗಳು. ಪ್ರತಿಲಿಪಿ ಸ್ಪರ್ಧೆಯಲ್ಲಿ ಅವರ ’ತಾಯಿ’ ಕಥೆ ಮೊದಲ ಬಹುಮಾನ,. ಹುತ್ತ ಕಥೆ ಹಾಗೂ ನ್ಯಾಸಾಂತರ ಕವನ ತೀರ್ಪುಗಾರರ ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ವಿಗತ ಕವನವು ಸಂಪದ ಸಾಲು ಪತ್ರಿಕೆಯ ಕವನ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದೆ.