Book Watchers

ಬಸವರಾಜು ದೇಸಿ

ಬಸವರಾಜು ಅವರು ಹುಟ್ಟಿದ್ದು ಬೆಂಗಳೂರು ಅದರೆ ಬಾಲ್ಯದ ನೆನಪುಗಳು ಇರುವುದು ಕುಣಿಗಲ್ನಲ್ಲಿ. ಓದಿದ್ದು ಮೆಕ್ಯಾನಿಕಲ್ ಎಂಜಿನೀಯರಿಂಗ್ ಡಿಪ್ಲೊಮಾ ಅದರೂ ವೃತ್ತಿ ಕಂಡುಕೊಂಡದ್ದು ಐಟಿ ಕ್ಷೇತ್ರದಲ್ಲಿ. ಹೀಗೆ ವೈರುಧ್ಯಗಳ ಮೇಲಾಟದಲ್ಲೇ ಜೀವನ; ಹೀಗಿದ್ದರೂ ಸುಂದರ ಬನ. ’ದೇವರಿಗೆ ಹೆದರದ ಧೈರ್ಯಶಾಲಿಯೂ ಆದ ನಾನು ಮನುಷ್ಯರನ್ನು ಎದುರಿಸಲಾಗದ ಮುಖೇಡಿ’ ಎಂದು ಹೇಳುವ ಅವರು ರೋಟಿ ಕಪಡ ಮಕಾನಿಗೆ ಕಿತಾಬನ್ನು ಸೇರಿಕೊಂಡಿರುವುದಷ್ಟೇ ಅವರ ದುರಾಸೆ. ಸದಾ ಎಚ್ಚರಿಸುವ, ಒಳತೋಟಿಯನ್ನು ವಿಸ್ತರಿಸುವ ಸಾಹಿತ್ಯಕ್ಕೆ ಅವರ ಆದ್ಯತೆ. ಸಂಗೀತ, ಫೋಟೋಗ್ರಫಿ ಕೂಡ ನನ್ನ ಆಸಕ್ತಿಯ ಕ್ಷೇತ್ರಗಳು. ಕೊಂಚ ಅಪರೂಪವೆನಿಸುವ ಹೆಸರಿನ ಹೆಂಡತಿ ಮತ್ತು ಮಗಳು ಅವರ ಬೆನ್ನ ಹುರಿ.

Articles