ಬೆಳಗೋಡು ರಮೇಶ ಭಟ್
ಬೆಳಗೋಡು ರಮೇಶ ಭಟ್ಟರು ವೃತ್ತಿಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಹಿರಿಯ ಪ್ರಬಂಧಕರು, ಪ್ರವೃತ್ತಿಯಲ್ಲಿ ಒಬ್ಬ ಅಪರೂಪದ ಕತೆಗಾರ ಮತ್ತು ಕವಿ. ಅವರು ಮೂಲತಃ ಉಡುಪಿಯವರು. 'ಜರಾಸಂಧ' (ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪುರಸ್ಕೃತ - 1987), 'ಅಂಬಿಗನ ಹಂಗಿಲ್ಲ' (ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ - 2005) ಪ್ರಕಟಿಸಿರುವ ಕವನ ಸಂಗ್ರಹಗಳು. 'ಮನುಷ್ಯರನ್ನು ನಂಬಬಹುದು' (ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ಪುರಸ್ಕೃತ) ಎನ್ನುವ ಅವರ ಕಥಾಸಂಗ್ರಹ (2005).ಪ್ರಕಟವಾದ ಮೂರೇ ತಿಂಗಳಲ್ಲಿ ಮಾರಾಟವಾಗಿ ಆಶ್ಚರ್ಯ ಹುಟ್ಟಿಸಿದ ಕೃತಿ.