ಚೇತನಾ ಕುಂಬ್ಳೆ
ಗಜ಼ಲ್ಗಳ ಮೂಲಕ ಪರಿಚಿತರಾಗಿರುವ ಚೇತನಾ ಕುಂಬ್ಳೆ ಅವರು ನಮ್ಮ ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಕುಂಬ್ಳದವರು. ಸಾಹಿತ್ಯಾಸಕ್ತರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಇವರು ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಸುಕಿನಲ್ಲಿ ಬಿರಿದ ಹೂಗಳು (ಗಜಲ್ ಸಂಕಲನ), ಪಡಿನೆಳಲು (ವಿಮರ್ಶಾ ಸಂಕಲನ) ಇವರ ಪ್ರಮುಖ ಕೃತಿಗಳು