ಚಿಂತಾಮಣಿ ಕೊಡ್ಲೆಕೆರೆ
ಬರಹಗಾರ ಚಿಂತಾಮಣಿ ಕೊಡ್ಲೆಕೆರೆ ಅವರು ಕತೆ ಕವಿತೆಗಳ ಮೂಲಕ ಪರಿಚಿತರಾದವರು. ಬಾಲ್ಯದಿಂದಲೂ ಸಾಹಿತ್ಯಾಸಕ್ತರಾಗಿದ್ದ ಇವರು ವಿವಿಧ ಪತ್ರಿಕೆಗಳಿಗೆ ಕತೆ ಕವಿತೆಗಳನ್ನು ಬರೆದು ಬಹುಮಾನ ಪಡೆದಿದ್ದಾರೆ. ಈ ಜಗತ್ತು, ಭೂಮಧ್ಯರೇಖೆ, ಬಭ್ರುವಾಹನ ಮತ್ತು ಇರುವೆ, ಸಿಂಡ್ರೆಲಾ-ಅಂಬ್ರಲಾ, ಮೊದಲ ಮನೆಯ ಮೆಟ್ಟಿಲು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.