ಯುವ ಕತೆಗಾರ್ತಿ ಎಡೆಯೂರು ಪಲ್ಲವಿ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರಿನವರು. ಕಾಲೇಜು ದಿನಗಳಲಿಂದಲೇ ಕತೆ ರಚನೆ ಮತ್ತು ವಾಚನದಲ್ಲಿ ತೊಡಗಿಸಿಕೊಂಡಿರುವ ಪಲ್ಲವಿ ಅವರು ರಚಿಸಿರುವ ಮಕ್ಕಳ ಕತಾ ಸಂಕಲನ ‘ಭೂಮ್ತಾಯಿ ಅಜ್ಜಿ ಆದ್ಲಾ?’ ಪ್ರಕಟಣೆಯ ಹಂತದಲ್ಲಿದೆ.
ಈ ನೈಜ ಕಥನಗಳನ್ನು ಮಕ್ಕಳಿಗೆ ತಲುಪಿಸಲು ನೀವು ಬಳಸಿರುವ ಸೂಕ್ಷ್ಮ ಹಾಗೂ ಸರಳ ಭಾಷೆಯ ಆಯ್ಕೆಗಳೂ ಆಪ್ತಗೊಳಿಸುತ್ತವೆ. ಹಾಸ್ಯ, ವಾಸ್ತವ, ಪ್ರಸ್ತುತ ಎನಿಸುವ ಈ ಕತೆಗಳನ್ನು ಮಕ್ಕಳು ಮಾತ್ರವಲ್ಲ ದೊಡ್ಡವರೂ ಓದಬೇಕಿದೆ. ‘ಹೀಗೂ ಆಗುತ್ತದೆ, ಗೀಜಗನ ಗೂಡಿಂದ ಗೀಜಗನ ಮರಿ ಹೊರಕ್ಕೆ ಬಂತು, ಏನಾಯ್ತು?, ನಮ್ಮ ಹಿಂದೇ ಹೊರಟಿದ್ದರು’ ಈ ಎಲ್ಲಾ ಕತೆಗಳು ನಿಮ್ಮ ಅನುಭವ ಕಥನವಾ? ಎಂಬ ಸಂದೇಹವನ್ನೂ ಮೂಡಿಸುತ್ತವೆ.