Book Watchers

ಜಿ.ಎನ್. ರಂಗನಾಥ ರಾವ್

ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ನಿವೃತ್ತರಾಗಿರುವ ಜಿ.ಎನ್‌. ರಂಗನಾಥರಾವ್‌ ಅವರು ಅನುವಾದಕ, ಲೇಖಕರಾಗಿ ಸಾಹಿತ್ಯಲೋಕದಲ್ಲಿ ಚಿರಪರಿಚಿತರು. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ರಂಗನಾಥರಾವ್‌ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದಾರೆ. ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧಗಳನ್ನು ರಚಿಸಿರುವ ಅವರದು ತೂಕಬದ್ಧ ಸಾಹಿತ್ಯ ವಿಮರ್ಶೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಅವರು ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಮಹತ್ವದ ಕೃತಿ ರಚನೆ ಮಾಡಿದ್ದಾರೆ.

Articles

ಹರಳುಗಟ್ಟುವ ದೃಷ್ಟಿಯಿಂದ ಒಂದು ಘನವಾದ ಕಾದಂಬರಿ

ಗೈರ ಸಮಜೂತಿ ಎನ್ನುವುದು ಇಲ್ಲಿ ಹಲವರ, ಹಲವು ನೆಲೆಗಳಲ್ಲಿ ಮತ್ತೆ ಮತ್ತೆ ಪ್ರಕಟಗೊಳ್ಳುತ್ತಾ, ಢಾಳವಾಗುತ್ತ ನಮ್ಮ ಸಮಾಜದ ಹಿಂದಿನ – ಇಂದಿನ ಎಲ್ಲ ಪ್ರಮಾದಗಳಿಗೆ, ಬಿಕ್ಕಟ್ಟುಗಳಿಗೆ, ಭವರೋಗಗಳಿಗೆ ರೂಪಕವಾಗುತ್ತ, Allegaryಯಾಗುತ್ತ ನಮ್ಮನ್ನು ಕಾಡಲಾರಂಭಿಸುತ್ತದೆ. ಕೊನೆಗೆ ಇದರಿಂದ ನಾವಿಂದು - ಪ್ರಸ್ತುತ ಸನ್ನಿವೇಶದಲ್ಲಂತೂ - ಬಿಡುಗಡೆ ಪಡೆಯಬೇಕೆಂಬ ಅರಿವನ್ನು ಓದುಗರಲ್ಲಿ ಮೂಡಿಸುವುದು ನಿಮ್ಮ ಕಾದಂಬರಿಯ ಎರಡನೆಯ ಯಶಸ್ಸೆಂದು ಭಾವಿಸಿದ್ದೇನೆ.

Read More...

`ಬುದ್ಧಚರಣ'ಕೆ ಶರಣು

ಕಾವ್ಯಾಲಂಕಾರವೆಂಬುದು ಇಲ್ಲಿ ವರ್ಣನೆ,ಉಪಮೆ,ಪ್ರತಿಮೆ,ಪ್ರತೀಕ,ರೂಪಕಾದಿಗಳ ಮುತ್ತು ಮಾಣಿಕ್ಯಗಳಿಂದ  ಶೋಭಾಯಮಾನವಾಗಿ `ಬುದ್ಧಚರಣ' ಓದನ್ನು ಒಂದು ಆಪ್ಯಯಮಾನವಾದ ಚಾರಣವನ್ನಾಗಿಸುತ್ತದೆ. ವಸ್ತುವಿನ ಅಂತ:ಸತ್ವಕ್ಕೆ ಅನುಗುಣವಾಗಿ ಭಾಷೆಯನ್ನು ಹದಗೊಳಿಸಿರುವ ನಿಮ್ಮ ಛಂದೋಬದ್ಧ ಪ್ರಯೋಗ ಮಹಾಕಾವ್ಯದ ಪುನುರುತ್ಥಾನದ ಮುಂಬೆಳಗಿನಂತೆಯೇ ತೋರುತ್ತದೆ. 

Read More...