Book Watchers

ಜಗದೀಶ್‌ ಕೊಪ್ಪ

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಜಗದೀಶ್, ಬೆಸಗರಹಳ್ಳಿಯಲ್ಲಿ ಪ್ರೌಢ ಶಿಕ್ಷಣ ಮತ್ತು ಪಿ.ಯು.ಸಿ ವಿದ್ಯಾಭ್ಯಾಸ ಹಾಗೂ ಬೆಂಗಳೂರು ವಿ.ವಿ.ಪುರಂ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿಯ ಕನ್ನಡ ವಿ.ವಿ.ಯಲ್ಲಿ ಜಾಗತೀಕರಣ ಕುರಿತ ಅಧ್ಯಯನ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕಳೆದ ಮೂರು ದಶಕದಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತು, ಪರಿಸರ ಕುರಿತು ವಿಶೇಷ ಆಸಕ್ತರು.

Articles

ಕಾಡುವ ಕಥೆಗಳ ಕಣಜ 'ದೇವರ ಕುದುರೆ’

ಒಂದು ಕಥಾ ವಸ್ತುವನ್ನು ಹೇಗೆ ನಿರ್ವಹಿಸಬೇಕು? ಪಾತ್ರಗಳ ಪೋಷಣೆ ಹೇಗಿರಬೇಕು? ಭಾಷೆಯ ಬಳಕೆಯಲ್ಲಿ ಇರಬೇಕಾದ ಎಚ್ಚರ ಹಾಗೂ ಕಥೆಗೆ ಪರಿಸರವನ್ನು ಕಟ್ಟಿಕೊಡುವ ರೀತಿ ಈ ಎಲ್ಲ ಕೌಶಲ್ಯಗಳನ್ನು ಇಂದಿನ ಯುವ ಲೇಖಕರು ಗಂಗಾಧರಯ್ಯನವರ ’ದೇವರ ಕುದುರೆ’ ಸಂಕಲನದಿಂದ ಕಲಿಯಬಹುದಾಗಿದೆ.

Read More...