ಕೆ. ಎಂ. ವಿಶ್ವನಾಥ ಮರತೂರ
ಕೆ. ಎಂ. ವಿಶ್ವನಾಥ ಮರತೂರ ಅವರು ಚಿಕ್ಕಂದಿನಿಂದಲೆ ಕವನ, ಲೇಖನ, ಕಾದಂಬರಿ, ಅಂಕಣ, ಬರೆಯುವ ಹವ್ಯಾಸವಿದ್ದು ಸಾಹಿತ್ಯದಲ್ಲಿ ಬೆಳೆಯುತ್ತಿರುವ ಯುವ ಪ್ರತಿಭೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದ ನಿವಾಸಿ. ಹಲವು ರಾಜ್ಯದ ಹಲವು ಪ್ರಶಸ್ತಿಗೆ ಭಾಜನರಾಗಿದ್ಧಾರೆ. ಅವರ ಹತ್ತು ಹಲವು ಲೇಖನಗಳು, ವಿಮರ್ಶಾ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನೇಕ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಇದೀಗ ನಾಡಿನ ಪತ್ರಿಕೆಗಳಿಗೆ ವಿಮರ್ಶೆಗಳನ್ನು ಬರೆಯುದರಲ್ಲಿ ಆಸಕ್ತಿ ತೋರಿದ್ದಾರೆ.