ದಕ್ಷಿಣ ಕನ್ನಡ ನೆಲ್ಯಾಡಿಯವರಾದ ಕಾರ್ತಿಕ್ ಗೌಡ ಪುಚ್ಚೇರಿ ಅವರು ಸಾಹಿತ್ಯಾಸಕ್ತರು. ಶೈಕ್ಷಣಿಕದಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿ ಪ್ರಸ್ತುತ ಬೆಂಗಳೂರಿನ ಇನ್ಫೋಸಿಸ್ ಲೀ ಕೆಲಸ ನಿರ್ವಹಿಸುತ್ತಿದ್ಧಾರೆ. ಚಾರಣದೊಂದಿಗೆ ಸಾಹಿತ್ಯ ಓದು, ಬರೆವಣಿಗೆಯೆಂದರೆ ಅಚ್ಚುಮೆಚ್ಚು.
ಒಂದಂತೂ ನಿಜ, ಓದುತ್ತಾ ಕಳೆದು ಹೋಗಿದ್ದೆ. ಅವನಲ್ಲಿ ನನ್ನ ನೋಡಲಾಗದೆ ಇದ್ದರೂ , ಮನದ canvas ನಲ್ಲಿ ಅಶ್ವತ್ಥಾಮನ ಜೀವನದ ಸುಂದರ ಚಿತ್ರ ಅಚ್ಚಾಗಿತ್ತು. ಲೇಖಕರು ಬರೆದ ಜೀವನ ಚರಿತ್ರೆ ಇಷ್ಟ ಆಗದೆ, ಕೈ ಸೋಲುತ್ತಿದ್ದರೂ, ಬರೆದಿದ್ದನ್ನು ಹರಿದು ಬಿಸಾಕಿ, ಕೇವಲ ಎರಡು ದಿನದಲ್ಲಿ ಎಡಕೈಯಲ್ಲಿ ಬರೆಯುವುದ ಕಲಿತು, ತನ್ನ ಜೀವನ ಚರಿತ್ರೆಯ ತಾನೇ ಬರೆಯಹೊರಡುತ್ತಾನೆ ಅಶ್ವತ್ಥಾಮ. ಅದೆಂತ ಛಲ!