ಕಾವೇರಿ ಹೆಚ್. ಎಂ
ಕಾವೇರಿ ಹೆಚ್. ಎಂ. ಅವರು ಹುಟ್ಟಿದ್ದು ಕೊಡಗಿನ ಪಾಲಿಬೆಟ್ಟದಲ್ಲಿ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಶ್ರಾಂತ ಕುಲಪತಿಗಳಾದ ಹಿ. ಚಿ. ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ‘ಬುಡಕಟ್ಟುಗಳ ಮೌಖಿಸ ಸಾಹಿತ್ಯ: ತಾತ್ವಿಕ ವಿವೇಚನೆ’ ಎಂಬ ವಿಷಯದಡಿ ಪಿ.ಎಚ್ಡಿ ಪದವಿ ಪಡೆದಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ಆಸಕ್ತಿ ತಳೆದಿರುವ ಅವರು ಓದು, ಹನಿಗವನ ರಚನೆಯಲ್ಲಿ ತೊಡಗಿರುತ್ತಾರೆ. ಜನಪದ ಮತ್ತು ಬುಡಕಟ್ಟುಗಳ ಅಧ್ಯಯನದಲ್ಲಿ ವಿಶೇಷ ಆಸಕ್ತಿ.