ಕವಿತಾ ಭಟ್
’ಬತ್ತದ ಕಣಜ’ ಗಂಗಾವತಿಯಲ್ಲಿ ಹುಟ್ಟಿ ಬೆಳೆದ ಕವಿತಾ ಭಟ್ ಅವರು ಮದುವೆಯ ನಂತರ ಬದುಕು ಕಂಡದ್ದು ಹಸಿರಿನ ಸೀರೆಗೆ ಕಡಲ ಅಂಚು ಹೊತ್ತ ಉತ್ತರ ಕನ್ನಡದ ಕುಮಟಾದಲ್ಲಿ. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಗೃಹಿಣಿಯಾಗಿರುವ ಅವರು ಸಾಹಿತ್ಯ ಮತ್ತು ಸಂಗೀತಾಸಕ್ತರು. ಪುಸ್ತಕಗಳನ್ನು ಓದುವುದು ಮತ್ತು ಓದಿದ ಪುಸ್ತಕಗಳ ಕಿರುಪರಿಚಯ ಮಾಡಿ ಓದುವ ಗೀಳು ಹತ್ತಿಸುವ ಮುಖ್ಯ ಹವ್ಯಾಸ ಇವರದು. ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ಅವರು ವಿಶ್ವವಾಣಿ, ಉದಯವಾಣಿ, ಹೊಸದಿಗಂತ ಸೇರಿದಂತೆ ಕೆಲ ಪತ್ರಿಕೆಗಳಿಗೆ ಹಾಗೂ ಓ ಮನಸೇ ಪಾಕ್ಷಿಕಕ್ಕೆ ಬರೆಯುವ ಹವ್ಯಾಸಿ ಲೇಖಕಿ.