Book Watchers

ಕೃಷ್ಣ ಪ್ರಕಾಶ ಉಳಿತ್ತಾಯ

ಕೃಷ್ಣಪ್ರಕಾಶ ಉಳಿತ್ತಾಯ ವೃತ್ತಿಯಲ್ಲಿ ಕರ್ಣಾಟಕ ಬ್ಯಾಂಕ್ ಉದ್ಯೋಗಿ. ಪ್ರವೃತ್ತಿಯಲ್ಲಿ ಕಲೆಯ ಸೆಳೆತಕ್ಕೆ ಒಳಗಾದವರು. ಕಲಾವಿದರಾಗಿ, ಕಲಾವಿಮರ್ಶಕರಾಗಿ ನಾಡಿನ ಯಕ್ಷಗಾನ ಪರಂಪರೆಯಲ್ಲಿ ಚಿರಪರಿಚಿತರಾಗಿದ್ದಾರೆ. ಕನ್ನಡ ಇಂಗ್ಲೀಷ್, ವೈದಿಕ ಸಾಹಿತ್ಯ ಇವರ ಅಚ್ಚುಮೆಚ್ಚಿನ ಅಧ್ಯಯನವಾಗಿದೆ. ಯಕ್ಷಗಾನಕ್ಕೆ ಸಂಬಂಧಿಸಿದ ಭಾಷಣಗಳನ್ನು ನೀಡುತ್ತಾ, ಹಲವಾರು ಪತ್ರಿಕೆಗಳಿಗೆ ಲೇಖನವನ್ನೂ ಬರೆದಿದ್ಧಾರೆ. ’ಅಗರಿ ಮಾರ್ಗ’ ಅವರ ಮೊದಲ ಕೃತಿ. ಹಲವಾರು ಯಕ್ಷಗಾನ ಮೇಳಗಳಿಗೆ ಅತಿಥಿ ಕಲಾವಿದರಾಗಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವರಿಗೆ ಯುವ ಯಕ್ಷಕಲಾರಾಧಕ ಪ್ರಶಸ್ತಿ ನೀಡಿದೆ ಗೌರವಿಸಿದೆ.

Articles

ಕಾದಂಬರಿಯ ಬಟ್ಟೆ ತೊಟ್ಟ ಕಾವ್ಯ `L'

ವಾದನ ಮೀಮಾಂಸೆಯಲ್ಲಿ ಬರುವ ವಿಚಾರ: ಅತಿ ಕಡಿಮೆ ಪಾಠಾಕ್ಷರಗಳನ್ನು ಬಳಸಿ ಆಳವಾದ ಭಾವ ತೀವ್ರತೆಯನ್ನು ಗಾನಕ್ಕೆ ಒದಗಿಸುವ ವಾದನ ಪಟುತ್ವ ಶ್ರೇಷ್ಠ ಎಂದು. ಇಲ್ಲಿ ಶಬ್ದಗಳು ವಿನಾಕಾರಣ ಚೆಲ್ಲಲ್ಲಿಲ್ಲ. ಶಬ್ದಗಳ ಅಪಮೌಲ್ಯವಿಲ್ಲ. ಜೋಗಿಯವರು ಸಂಗೀತದ ಹದಕ್ಕೆ ಈ ಕಾದಂಬರಿಯನ್ನು ತಂದಿದ್ದಾರೆ.

Read More...

ಬಾಲಮುರಳೀಗಾನದ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’

ರಾಗ- ರಾಗಿಣಿಯರ ನಾದ ತರಂಗಗಳು ಮತ್ತೋರ್ವ ಕವಿಯ ಮೂಲಕ ಶಬ್ಧಗಳ ಸುಂದರ ಕಾವ್ಯ ಕಟ್ಟೋಣವಾಗಿ ಒಡಮೂಡುವ ಅಲೌಕಿಕ ಕಾವ್ಯ- ಕರ್ಮದ ಓದಿಗೆ ಸಿದ್ಧವಾದ ಓದುಗನಿಗೂ ಆ ಸಂಗೀತದ ಆಳದ ಅರಿವನ್ನು ಅನುಭವಕ್ಕೆ ಕೊಡುತ್ತದೆ. ಮಾತಿಗೆ ನಿಲುಕದ ರೀತಿ!

Read More...

ಜೀವನ ಪ್ರೀತಿಯ ‘ವರ್ಜಿನ್ ಮೊಜಿತೊ’

ಎರಡು ಪಲಾಯನಗಳ ಮನಸ್ಥಿತಿಯ ಮಧ್ಯ ನಡೆಯುವ ಕತೆ ಇದು. ಮಾರಿಕಾಂಬಾ ಜಾತ್ರೆಯ ಸಂದರ್ಭ ತನ್ನ ತಂಗಿ ರೇವತಿಯ ಜತೆ ಬೊಂಬಾಯಿ ಪೆಟ್ಟಿಗೆಯ ಜಗತ್ತನ್ನು ನೋಡುತ್ತಾ ಇದ್ದ ಸದಾನಂದನಿಂದ ತಪ್ಪಿಹೋದ ತಂಗಿ ರೇವತಿ- ಮತ್ತಿನ, ಕತೆಗಾರರೇ ಹೇಳುವ 'ಸ್ಥಬ್ಧ ಜಗತ್ತು' ಇದರಿಂದ ಮನಸ್ಸು ಬಯಸುವ ಪಲಾಯನ ಸದಾನಂದನನ್ನು ಬೆಂಗಳೂರಿಗೆ ಕರೆತಂದದ್ದು

Read More...

ಮನ ತಂಪಿಸುವ ’ಮಾತಿಗೆ ಮುನ್ನ’ ಓದು

ಎದೆಯ ತಲ್ಲಣ ಈ ಕಾವ್ಯವನ್ನು ಸೃಜಿಸಿದೆ “ ಬಿಡದೆನ್ನ ನಿನ್ನೆದೆಯ ನೀರಿನಿ೦ದೆರೆದೆನ್ನ” ಕೊನೆಗೆ ಕವಿ ತಾನು ಕ೦ಡ ಹುಡುಗಿಯನ್ನು ಬೇಡುತ್ತಾನೆ ಅಮ್ಮನಾಗಿ “ನಿನ್ನೆದೆಯ ನೀರಿನಿ೦ದ” ಅ೦ದರೆ ಇಲ್ಲಿ ತೋಳ್ಪಾಡಿಯವರು ಕ೦ಡದ್ದು ಕರುಣೆಯನ್ನು. ಎದೆಯ ಕರುಣಾ ಸಮುದ್ರವನ್ನು ಅದಕ್ಕೇ ಕೊನೆಗೆ “ಮನದುರಿಯನಾರಿಸವ್ವ” ಎ೦ಬ ಮಾತು ಬ೦ದದ್ದು ಎನ್ನತ್ತಾರೆ ತೋಳ್ಪಾಡಿಯವರು. 

Read More...