ಕ್ಷಿತಿಜ್ ಬೀದರ್
ಕನ್ನಡದ ಪ್ರಮುಖ ಕಥೆಗಾರ ಕ್ಷಿತಿಜ ಬೀದರ್ ಅವರು ಸಾಹಿತ್ಯ, ಓದಿನಲ್ಲಿ ಬಹು ಮೋಹಕತೆ ಉಳ್ಳವರು. ಮೂಲ ಹೆಸರು ಬಸವರಾಜ್ ಮಠಪತಿ. ಕ್ಷಿತಿಜ ಬೀದರ್ ಮತ್ತು ಕಿಂಸ್ತಘ್ನು ತುಮಕೂರು ಅವರ ಕಾವ್ಯನಾಮಗಳು. ಅವರ ಹಲವಾರು ಕಥೆಗಳು, ಲೇಖನಗಳು ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮುಕ್ತ, ಅಸ್ಪಷ್ಟ ಕಾದಂಬರಿಗಳನ್ನು ರಚಿಸಿದ್ದಾರೆ. ಮುನ್ಸಿ ಪ್ರೇಮಚಂದ ಅವರ ’ಮುದ’ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಸ್ತುತ ’ಕಥಾ ಸ್ಪೋಟ’ ಎಂಬ ಕಥಾ ಸಂಕಲನವನ್ನು ಹೊರತರುವಲ್ಲಿ ನಿರತರಾಗಿದ್ಧಾರೆ. ಈವರೆಗೆ ಸುಮಾರು 14 ಕಾದಂಬರಿ, 250 ಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದಾರೆ.