Book Watchers

ಮಂಗಳ ಸಿ.

ಬರವಣಿಗೆಯ ಆರಂಭಿಕ ಹೆಜ್ಜೆಯಲ್ಲೇ ಗಮನಸೆಳೆದಿರುವ ಲೇಖಕಿ ಮಂಗಳ. ಸಿ ಬಯಲು ಸೀಮೆ ಬದುಕಿನ ಅನುಭವಗಳಿಗೆ ಅಕ್ಷರ ರೂಪ ನೀಡಿದ ಬರಹಗಾರ್ತಿ. ಕನ್ನಡ ಸಾಹಿತ್ಯ ಲೋಕಕ್ಕೆ ಸಕ್ಕರೆ ನಾಡು ಮಂಡ್ಯದ ನವಚಿಗುರು ಮಂಗಳ. ಸಿ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೊಡಿಗೆಹಳ್ಳಿಯಲ್ಲಿ ಜನಿಸಿದರು. ಮೈಲಾರಪಟ್ಟಣದಲ್ಲಿ ಹತ್ತನೇ ತರಗತಿವರೆಗೆ ವ್ಯಾಸಂಗ. ಬೆಂಗಳೂರು ವಿಶ್ವವಿದ್ಯಾಲಯದ ಪದವೀಧರೆ, ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದವರು. ಸದ್ಯ ಬೆಂಗಳೂರಿನಲ್ಲಿ ನೆಲೆನಿಂತಿರುವ ಮಂಗಳ ಅವರ ಚೊಚ್ಚಲ ಕೃತಿ ಕೃಷ್ಣಮುದ್ರಿಕೆ . ಹೊಸ ಬಗೆಯ ಕಥಾಹಂದರ ಮತ್ತು ನಿರೂಪಣಾಶೈಲಿಯುಳ್ಳ ವಿಶಿಷ್ಟ ಕಾದಂಬರಿ.

Articles

ನಾಳೀನ ಚಿಂತ್ಯಾಕ....

ಹುಟ್ಟಿನಿಂದ ಹಿಡಿದು ಸಾಯುವ ತನಕ ತಮ್ಮ ಇಡೀ ಬದುಕು ದುರಂತದಿಂದ ತುಂಬಿದ್ದರೂ ಆತ್ಮಹತ್ಯೆ ಮಾಡಿಕೊಳ್ಳದೆ, ಅವರು ಬದುಕನ್ನು ಎದುರಿಸಿದ ರೀತಿ ಮಾದರಿ. ಬದುಕಿದ್ದಾಗ ಮೂರು ಹೊತ್ತಿನ ಊಟ ಹಾಕದ ಮಕ್ಕಳು ಸತ್ತಾಗ ಅಂತ್ಯ ಸಂಸ್ಕಾರ ಮಾಡಿ, ತಮ್ಮ ಜನ್ಮಕ್ಕೆ ಮುಕ್ತಿ ನೀಡಲಿ ಎಂದು ಬಯಸುವ ತಂದೆ ತಾಯಿಯರಿದ್ದಾರೆ.

Read More...