ನಾಗರಾಜ ಷಣ್ಮುಖಪ್ಪ ರಂಗನ್ನವರ
ನಾಗರಾಜ ಷಣ್ಮುಖಪ್ಪ ಅವರು ಬಾಗಲಕೋಟೆಯ ತಳಗಿಹಾಳದವರು. ನಿರಂತರ ಓದಿನ ಆಸಕ್ತಿ. ಸದಾ ಒಂದಿಲ್ಲೊಂದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರವಾಸ, ಚಿತ್ರಕಲೆ, ಸಂಗೀತದ ಹವ್ಯಾಸವುಳ್ಳವರು. ಓಶೋ, ಕೃಷ್ಣಮೂರ್ತಿ, ಗುಲ್ಜಾರ್, ತೇಜಸ್ವಿ, ಜೋಗಿ, ಬೈರಪ್ಪ, ಹೆಮಿಂಗ್ವೆ, ಕೇಶವ ಮಳಗಿ ಅವರ ನೆಚ್ಚಿನ ಲೇಖಕರು. ಸಾಹಿತ್ಯವನ್ನು ಬಹುವಾಗಿ ಪ್ರೀತಿಸುವ ಅವರು ಗುಲ್ಜಾರ್ರ ’ಲ್ಯಾಂಡ್ ಸ್ಕೇಪ್, ಪೇಟಿಂಗ್, ಹೂ ಕಂಪನ’, ಓಶೋರ ’ಒಂದು ಕಪ್ ಚಹಾ’ ಮುಂತಾದ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇತ್ತಿಚಿನ ದಿನಗಳಲ್ಲಿ ಪುಸ್ತಕ ವಿಮರ್ಶೆ ಬರೆಯುವುದರಲ್ಲೂ ಸಕ್ರಿಯರು.