ಪಿ. ಆರಡಿಮಲ್ಲಯ್ಯ ಕಟ್ಟೇರ
ವೃತ್ತಿಯಿಂದ ಉಪನ್ಯಾಸಕರಾಗಿರುವ ಪಿ. ಆರಡಿಮಲ್ಲಯ್ಯ ಕಟ್ಟೇರ ಅವರು ಯುವ-ಉತ್ಸಾಹಿ ವಿದ್ವಾಂಸರು. ಖಚಿತ ವೈಚಾರಿಕ ನಿಲುವು, ನೇರ ನುಡಿ-ಬರವಣಿಗೆ ಅವರ ವಿಶೇಷ. ಚಳ್ಳಕೆರೆ ತಾಲ್ಲೂಕಿನ ಓಬಯ್ಯನಹಟ್ಟಿಯ ಕಟ್ಟೇರಕಪ್ಲೆಯಲ್ಲಿ ಪರ್ವತಯ್ಯ ಮತ್ತು ಪಾಲಮ್ಮ ಮಗನಾಗಿ ಜನನ. ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಮೂರನೆಯ ರ್ಯಾಂಕ್ ಪಡೆದಿದ್ದು ’ನೀರಗನ್ನಡಿ, ಗಗ್ಗರಿ ನುಡಿಸುವ ಬೆರಳು’ ಎಂಬ ಎರಡು ಕವನ ಸಂಕಲನಗಳು ಪ್ರಕಟವಾಗಿವೆ. ಕುವೆಂಪು ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳು ಭಾಷೆಯ ಕುರಿತ ಎರಡು ಲೇಖನಗಳನ್ನು ಪದವಿಗೆ ಪಠ್ಯವಾಗಿಸಿವೆ.