ಕಥೆಗಾರನೊಬ್ಬನಲ್ಲಿ ಕಥೆ ಹುಟ್ಟಿಕೊಳ್ಳುವ ಪ್ರಕ್ರಿಯೆಯ ಕಥಾನಕವೇ ಅದ್ಭುತ! ಪೂರ್ತಿ ಪುಸ್ತಕ ಓದಿದ ಮೇಲೆ ನನಗನ್ನಿಸಿದ್ದು, ನಿಮ್ಮ ಪತ್ರಿಕಾ ಪ್ರಪಂಚದ ಜೀವನ ಸೃಜನಶೀಲ ಕಥೆಗಾರನನ್ನು ಸಾಯಿಸಲಿಲ್ಲ, ಬದಲಿಗೆ ಸಾಣೆ ಹಿಡಿದಂತೆ ಮೊನಚಾಗಿಸಿದೆ. ಸಾವಿನ ಮನೆ ಬಾಗಿಲು ತಟ್ಟಿ ಬಂದವರು ಜೀವನ ನೋಡುವ ದೃಷ್ಟಿ ಬದಲಾಗುತ್ತದೆ ಅಂತಾರಲ್ಲ, ಆ ರೀತಿಯಲ್ಲಿ ನೀವು ನೋಡುವ ನೋಟ ಬದಲಿಸಿ ನಿಮ್ಮಲ್ಲಿರುವ ಕಥೆಗಾರನಿಗೆ ಇನ್ನಷ್ಟು ಹೊಳಪು ಕೊಟ್ಟಿದೆ. ಅದಾದ್ದಾಯ್ತು ಬಿಡಿ ಇನ್ನು ಮುಂದಕ್ಕೆ ಒಂದೇ ಒಂದು ಆಷಾಢದ ಮಳೆ ಹನಿ ಹಾಗೆ ಹರಿದುಹೋಗಲಿಕ್ಕಿಲ್ಲ, ಅದು ಸೃಷ್ಟಿಸಿದ ಕಥೆಗಳು ಮುಂದಿನ ಆಷಾಢದೊಳಗೆ ಅಚ್ಚಾಗಿ ನಮ್ಮ ಕೈ ಸೇರಲೇ ಬೇಕು,