ಸಾಸ್ವೆಹಳ್ಳಿ ಸತೀಶ್
ಅಧ್ಯಾಪಕ ವೃತ್ತಿಯೊಂದಿಗೆ ಸೃಜನಶೀಲ ನಾಟಕ ಬರವಣಿಗೆ, ನಿರಂತರ ರಂಗ ಪ್ರಯೋಗ ಹೀಗೆ ನಾನಾ ಪ್ರವೃತ್ತಿಗಳಲ್ಲಿ ಬಿಡುವಿಲ್ಲದೆ ತಮ್ಮನ್ನು ತಾವು ತೊಡಗಿಸಿಕೊಂಡವರು ಸಾಸ್ವೆಹಳ್ಳಿ ಸತೀಶ್. ಮೂಲತಃ ಶಿವಮೊಗ್ಗದವರು. ಅವರು ಹುಟ್ಟಿದ್ದು 1967 ಜನೆವರಿ 27ರಂದು. ನಾಗನ ಕಥೆ, ದೇವರ ಹೆಣ, ಕೆಂಡದ ಮಳೆ ಕರೆವಲ್ಲಿ ಉದಕವಾದವರ ಕಥೆ, ಸಂಸ್ಕಾರ, ಬೆಟ್ಟದಾಚೆ ಮುಂತಾದ ಕಥೆಗಳನ್ನು ರಂಗಕ್ಕೆ ಅಳವಡಿಸಿದ್ದಾರೆ. ಸಾಹಿತ್ಯದ ಓದು ಬರವಣಿಗೆಯಲ್ಲಿ ಆಸಕ್ತಿ.