Book Watchers

ಶಿವು ಕೆ. ಲಕ್ಕಣ್ಣವರ

ಶಿವು ಲಕ್ಕಣ್ಣವರ, ಶಾಲಾ ದಿನಗಳಲ್ಲೇ ಪ್ರೇಮ ಕಾವ್ಯದಿಂದ ಶುರುವಾದ ಬರವಣಿಗೆ ಮುಂದೆ ಕಾಲೇಜು ದಿನಗಳಿಂದ ಸಾಮಾಜಿಕ ಸ್ಪಂದನದ ಬರವಣಿಗೆಗೆ ಬೆಳೆಯಿತು. 'ಹೀಗೊಂದು ಮುಟ್ಟಬಾರದರ ಕತೆ' ಕವನ ಸಂಕಲನ ಮತ್ತು ಕಾಲೇಜು ದಿನಗಳಲ್ಲೇ ಬರೆದ 'ಸಾಮರಸ್ಯ ಬಿಂದು' ಇನ್ನೂ ಹಸ್ತಪ್ರತಿಯಲ್ಲೇ ಇವೆ. ಅವುಗಳನ್ನು ಈಗ ಪುಸ್ತಕ ರೂಪದಲ್ಲಿ ತರುವ ಆಸೆ ಹೊತ್ತಿದ್ದಾರೆ… ಹೀಗೆ ಹವ್ಯಾಸಿ ಬರಹಗಾರರಾಗಿದ್ದು, ಪತ್ರಕರ್ತರೂ ಹೌದು. ಅರಕೇರಿಯವರ ಆಗಿನ 'ಈ ವಾರ' ವಾರ ಪತ್ರಿಕೆಯಲ್ಲಿ ಕಾಲೇಜು ದಿನಗಳಲ್ಲೇ ಧಾರವಾಡ ಜಿಲ್ಲೆಯ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಶೂದ್ರ ಶ್ರೀನಿವಾಸರ ವಾರ ಪತ್ರಿಕೆಗೆ ಸಾಹಿತ್ಯಕ ಬರವಣಿಗೆ. ಆನಂತರ 'ಅಗ್ನಿ' ವಾರ ಪತ್ರಿಕೆಗೆ ವರದಿ, ಲೇಖನ ಬರೆದಿದ್ದಾರೆ.

Articles

ನೈಜ ಚಿತ್ರಣದ 'ಕೆಂಗುಲಾಬಿ'

ಲೈಂಗಿಕ ವೃತ್ತಿಯು ಸರಿ ಅಥವಾ ತಪ್ಪು ಎಂಬುದು ಮುಖ್ಯವಲ್ಲ, ಒಂದು ಹೊತ್ತಿನ ಅನ್ನಕ್ಕಾಗಿ ಲೈಂಗಿಕ ಕಾರ್ಯಕರ್ತೆಯರಾಗಿ ಬದುಕಬೇಕಾದ ಅನಿವಾರ್ಯ ಸ್ಥಿತಿ ರೂಪುಗೊಳ್ಳುವ ರೀತಿಯನ್ನು ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ವೇಶ್ಯೆಯರ ಬದುಕಿನ ಅನಾವರಣ ಎಂಬ ಟ್ಯಾಗ್ ಲೈನ್ ಹೊಂದಿದೆ ಈ ಕಾದಂಬರಿ.

Read More...