ಚಿಂತಕರು ಸಾಮಾಜಿಕ ಕಾರ್ಯಕರ್ತರಾಗಿರುವ ಶ್ರೀನಿವಾಸ ಕಾರ್ಕಳ ಅವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು. ಪತ್ರಕರ್ತೆ ರಾಣಾ ಅಯೂಬ್ ಅವರ ಗುಜರಾತ್ ಫೈಲ್ಸ್ಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಮಂಜುನಾಥ ಚಾಂದ್ ರ ಕಾದಂಬರಿ ‘ಕಾಡ ಸೆರಗಿನ ಸೂಡಿ’ಯ (ಅಕ್ಷರಮಂಡಲ ಪ್ರಕಾಶನ) ಬಹುತೇಕ ಪಾತ್ರಗಳು ಮಾತನಾಡುವುದು ಈ ಸೊಗಸಾದ ಕುಂದಗನ್ನಡದಲ್ಲಿ. ಈ ಭಾಷೆಯನ್ನು ಬಳಸಿಕೊಂಡಿರುವ ಮತ್ತು ದುಡಿಸಿಕೊಂಡಿರುವ, ಹಾಗೆಯೇ ನನಗೆ ತುಂಬ ಪರಿಚಯವಿದ್ದ ಆ ಭಾಗದ ಪರಿಸರವನ್ನು ಬಳಸಿಕೊಂಡು ಬರೆದಿರುವುದರಿಂದಲೂ ಈ ಕಾದಂಬರಿ ನನಗೆ ಇಷ್ಟವಾಯಿತು.
ಮಂಗಳೂರಿನಲ್ಲಿ ರಿಫೈನರಿ ಸ್ಥಾಪನೆಯಾದಾಗ ಅನೇಕ ಕೃಷಿಕರು ತಮ್ಮ ಜಮೀನು ಕಳೆದುಕೊಂಡರು. ಒಂದು ಕಾಲನಿ ಸ್ಥಾಪಿಸಿ ಅಲ್ಲಿ ಅವರಿಗೆ ವಸತಿ ಕಲ್ಪಿಸಲಾಯಿತು. ಈ ಸಂದರ್ಭ ಗೆಳೆಯ ನಟೇಶ ಉಳ್ಳಾಲ್ ಈ ನಿರ್ವಸಿತರ ಬಗ್ಗೆ ಒಂದು ಸಾಕ್ಷ್ಯ ಚಿತ್ರ ನಿರ್ಮಿಸಿದರು. ಅದರಲ್ಲಿ ಒಬ್ಬಳು ವಯೋವೃದ್ದೆ ಮಾತನಾಡುತ್ತಾ “ಇತ್ತೆ ದಾದ ಮಲ್ಪುನ ಮಗ, ಬಾನ ತೂವೊಂದು ಕುಲ್ಲುನ” (ಈಗ ಏನು ಮಾಡುವದು ಮಗಾ, ಆಕಾಶ ನೋಡುತ್ತ ಕೂರುವುದು) ಎಂದು ನೋವಿನಿಂದ ಹೇಳುತ್ತಾಳೆ!