ಸೌಮ್ಯ ಪಿ.
ಕವಿ ಸೌಮ್ಯ ಪಿ. ಅವರು 'ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಸಣ್ಣಕತೆಗಳು' ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿಗಾಗಿ ಅಧ್ಯಯನ ಮಾಡುತ್ತಿದ್ಧಾರೆ. ಉದಯವಾಣಿ, ಹೊಸದಿಗಂತ, ಮಯೂರ, ಹೊರನಾಡ ಕನ್ನಡಿಗ, ಸಂಕ್ರಮಣ, ಸಂಕ್ರಾಂತಿ ಮುಂತಾದ ಪತ್ರಿಕೆಗಳಲ್ಲಿ ಸೃಜನಶೀಲ ಬರಹಗಳು ಮತ್ತು ವಿಮರ್ಶೆಗಳು ಪ್ರಕಟವಾಗಿವೆ. 'ಸಂಚಯ' ವಿಮರ್ಶಾ ಸ್ಪರ್ಧೆಯಲ್ಲಿ, ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ಧಾರೆ.