ಸೌರಭಾ ರಾವ್
ಮೈಸೂರಿನಲ್ಲಿ ಹುಟ್ಟಿ ಬೆಳೆದ ಸೌಮ್ಯ, ಓದು ಮುಗಿದ ಮೇಲೆ ಕೆಲಸವನ್ನರಸಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಅಲೆಮಾರಿ ಮನಸ್ಸಿಗೆ ಜೀವಸಂಕುಲವನ್ನು ಹೊರೆಯುತ್ತಿರುವ ಭೂಮಿಯೆಂದರೆ ಕಣ್ತುಂಬಿಬರುವಷ್ಟು ಪ್ರೀತಿ. ಪ್ರಾಕೃತಿಕ ಚರಿತ್ರೆ ಪ್ರತಿದಿನದ ಬೆರಗು ಕೆರಳಿಸುವ ವಿಷಯ. ಸಂಗೀತ, ನಾಟಕ, ಸಿನೆಮಾ, ಓದು-ಬರಹದೆಡೆಗೆ ನಿತ್ಯತುಡಿತ. ಕವಿತೆ ಮೊದಲ ಪ್ರೇಮವಾದರೂ ನಡುವೆ ಕನ್ನಡ, ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿರುತ್ತಾರೆ. ಎಲ್ಲವನ್ನು ವಿಮರ್ಶಿಸಿ ಅರಿಯುವ ತುಡಿತ ಅವರದ್ದು