Book Watchers

ಸುರೇಶ ಎಲ್. ರಾಜಮಾನೆ

ಸುರೇಶ ಎಲ್. ರಾಜಮಾನೆ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೋಕಿನವರು. ಸದ್ಯ ರಾಯಚೂರು ಜಿಲ್ಲೆ ಲಿಂಗಸಗೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಂದಿನಿಂದಲು ಸಾಹಿತ್ಯದೆಡೆಗೆ ಒಲವು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಸುರೇಶ್ ಅವರು 'ಸುಡುವ ಬೆಂಕಿಯ ನಗು' ಮತ್ತು 'ಮೌನ ಯುದ್ಧ' ಎಂಬ ಎರಡು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಯೋಗಶೀಲತೆಗೆ ತಮ್ಮನ್ನು ತೆರೆದುಕೊಳ್ಳುವ ಸಹೃದಯಿ.

Articles

ಹಂಗಿಲ್ಲದ ಹಾದಿಯ ಓದಿನ ಹಂಗಿನಲಿ 

ಬದುಕಿನ ಹೋರಾಟದಲ್ಲಿ ಬದುಕನ್ನು ಹಗುರವಾಗಿ ಪರಿಗಣಿಸದೇ ಬದುಕುವ ಹಸಿವನ್ನು ತಣಿಸಿಕೊಂಡು ಸಾಗುವಾಗ.. ಬದುಕನ್ನೆ ತೊರೆದು ಹೊರಟು ನಿಂತ ಬುದ್ಧನನ್ನು ಎದುರಾಗೊಳ್ಳಲೇಬೇಕು. ಈ ಹಂಗಿಲ್ಲದ ಹಾದಿಯಲ್ಲಿ ಕವಯತ್ರಿ ಜಹಾನ್ ಅರಾ ಅವರು ಬುದ್ಧನನ್ನು ಎಳೆದುತಂದು ಬದುಕಿನ ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುವ ಧೈರ್ಯ ಮಾಡುತ್ತಾರೆ. ಬುದ್ಧನನ್ನು ಅರಿತಮೇಲೆ ಶರಣಾಗತರಾಗಿ ಬುದ್ಧನನ್ನು ಆರಾಧಿಸುತ್ತಾರೆ.

Read More...