ವಿಶ್ವಾಸ್ ಭಾರಾದ್ವಾಜ್
ವಿಶ್ವಾಸ್ ಭಾರದ್ವಾಜ್ ಅವರು ಶಿವಮೊಗ್ಗ ಜಿಲ್ಲೆಯ ಸಾಗರದವರು. ಕನ್ನಡ ಪತ್ರಿಕೋದ್ಯಮ, ದೃಶ್ಯ ಮಾಧ್ಯಮ ಹಾಗೂ ಡಿಜಿಟೆಲ್ ಮಾಧ್ಯಮದಲ್ಲಿ ಹನ್ನೆರಡು ವರುಷ ಕೆಲಸ ಮಾಡಿದ ಅನುಭವ ಹೊಂದಿದ್ಧಾರೆ. ಗೋಪಾಲಕೃಷ್ಣ ಅಡಿಗರ ಪದ್ಯಗಳನ್ನ ಓದುತ್ತ ಸಾಹಿತ್ಯದಲ್ಲಿ ಒಲವು ತಾಳಿದವರು. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಬಿಸಿನೆಸ್ ಮ್ಯಾನೇಜ್ಮೆಂಟ್ನ ಪದವಿ ಹಾಗೂ ಮೈಸೂರಿನ ಮಾನಸ ಗಂಗೋತ್ರಿಯ ಮುಕ್ತ ವಿವಿಯ ಸಮೂಹ ಸಂಪನ್ಮೂಲ ಹಾಗೂ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದಿದ್ಧಾರೆ. `ಕಾಲು ಹಾದಿ’ ಎಂಬ ಹನಿ ಕತಾ ಸಂಕಲನವನ್ನು ಪ್ರಕಟಿಸಿದ್ದಾರೆ.