Book Watchers

ವಿಶ್ವಾಸ್ ಭಾರಾದ್ವಾಜ್

ವಿಶ್ವಾಸ್ ಭಾರದ್ವಾಜ್ ಅವರು ಶಿವಮೊಗ್ಗ ಜಿಲ್ಲೆಯ ಸಾಗರದವರು. ಕನ್ನಡ ಪತ್ರಿಕೋದ್ಯಮ, ದೃಶ್ಯ ಮಾಧ್ಯಮ ಹಾಗೂ ಡಿಜಿಟೆಲ್‌ ಮಾಧ್ಯಮದಲ್ಲಿ ಹನ್ನೆರಡು ವರುಷ ಕೆಲಸ ಮಾಡಿದ ಅನುಭವ ಹೊಂದಿದ್ಧಾರೆ. ಗೋಪಾಲಕೃಷ್ಣ ಅಡಿಗರ ಪದ್ಯಗಳನ್ನ ಓದುತ್ತ ಸಾಹಿತ್ಯದಲ್ಲಿ ಒಲವು ತಾಳಿದವರು. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನ ಪದವಿ ಹಾಗೂ ಮೈಸೂರಿನ ಮಾನಸ ಗಂಗೋತ್ರಿಯ ಮುಕ್ತ ವಿವಿಯ ಸಮೂಹ ಸಂಪನ್ಮೂಲ ಹಾಗೂ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದಿದ್ಧಾರೆ. `ಕಾಲು ಹಾದಿ’ ಎಂಬ ಹನಿ ಕತಾ ಸಂಕಲನವನ್ನು ಪ್ರಕಟಿಸಿದ್ದಾರೆ.

Articles

ದಿ ಮಾಸ್ಟರ್ ಪೀಸ್ ‘ತೇಜೋ ತುಂಗಭದ್ರಾ’

ನಾವು ಇತಿಹಾಸದಲ್ಲಿ ಓದಿಕೊಂಡಿದ್ದು ವಾಸ್ಕೋಡಗಾಮ ಭಾರತಕ್ಕೆ ವಲಸೆ ಮಾರ್ಗ ಕಂಡುಹಿಡಿದ, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನಿಗೆ ಪರ್ಷಿಯನ್ ಕುದುರೆಗಳನ್ನು ಆಲ್ಬುಕರ್ಕ ತಂದೊದಗಿಸಿದ ಎನ್ನುವುದಷ್ಟೆ. ಇದರ ಹಿನ್ನೆಲೆ ಮುನ್ನೆಲೆಯಲ್ಲಿ ಇದೇ ಗಾಮ ಸಾಹೇಬ, ಇದೇ ಆಲ್ಬುಕರ್ಕನ ಪೈಶಾಚಿಕ ಮುಖಗಳನ್ನು ಪರಿಚಯಿಸುತ್ತದೆ ಈ ಕಾದಂಬರಿ.

Read More...