‘ಸಿಸ್ಟರ್ ಅರುಣ ಮತ್ತು ಇತರ ಕಿರು ಕಾದಂಬರಿಗಳು’ ಕೃತಿಯು ಸಾಯಿಸುತೆ ಅವರ ಸಾಮಾಜಿಕ ಕಿರು ಕಾದಂಬರಿಯಾಗಿದೆ. ಈ ಕಾದಂಬರಿಯು ನಾಲ್ಕು ಅಧ್ಯಾಯಗಳಾದ ಸಿಸ್ಟರ್ ಅರುಣ, ಸಂಕೋಲೆ, ಏಳು ಹೆಜ್ಜೆಗಳು ಹಾಗೂ ಸಮಾನಾಂತರ ರೇಖೆಗಳನ್ನು ಒಳಗೊಂಡಿದೆ. ಸಿಸ್ಟರ್ ಅರುಣ ಕಾದಂಬರಿಯು ಅರುಣ ಪಾತ್ರಧಾರಿಯ ಜೀವನವನ್ನು ವಿವರಿಸುತ್ತಾ, ಆಕೆಯ ವಿಚಾರಧಾರೆ, ಜೀವನಶೈಲಿ ಹಾಗೂ ಬದುಕಿನಲ್ಲಿ ಆಕೆ ಅಳವಡಿಸಿಕೊಂಡಿರುವಂತಹ ಕಾರ್ಯವೈಖರಿಗಳನ್ನು ತಿಳಿಸುತ್ತದೆ. ‘ಸಂಕೋಲೆ’ ಕಾದಂಬರಿಯು ನಿರ್ಮಲ ಪಾತ್ರವನ್ನು ಕಟ್ಟಿಕೊಡುತ್ತ ಆಕೆಯ ತುಂಟಾಟ, ಮಾತಿನ ಲಹರಿ, ಸ್ನೇಹ ತುಂಬಿದ ಒಡನಾಟ ಹೀಗೆ ಎಲ್ಲವನ್ನು ವಿವರಿಸುತ್ತದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...
READ MORE