ಕಾದಂಬರಿಗಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ ಸುಭಾಷಿಣಿ. ಕೃತಿಯಲ್ಲಿ ಲೇಖಕಿಐಏ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಹೇಳುವಂತೆ,’ಸಾಮಾಜಿಕ ಬದುಕಿನ ಜೀವನದರ್ಶನ, ಜೀವನ ಮವಲ್ಯಗಳ ಆಳವಾದ ಚಿಂತನೆ ಇಲ್ಲದಿದ್ದರೂ ಬದುಕಿನ ನಿತ್ಯ ವ್ಯವಹಾರಗಳು, ಪ್ರಂಆನೀಕ ಹೋರಾಟದ ಒಮದು ಮಗ್ಗುಲಿನ ಪರಿಚಯವಿದೆ ಈ ಕೃತಿಯಲ್ಲಿ. ನಾನು ಖಮಡ ದಿಟ್ಟ ಅಪರೂಪದ ಹೆಣ್ಣು ಇಲ್ಲಿ ’ಸುಭಾಷಿಣಿ’ಯಾಗಿ ಜನ್ಮ ತಳೆದಿದ್ದಾರೆ’ ಎಂದಿದ್ದಾರೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...
READ MORE