Back To Top

 ನ್ಯಾನೋ ತಂತ್ರಜ್ಞಾನದಲ್ಲಿ ಹನುಮಂತನ ಇರುವಿಕೆ ಕಂಡುಬಂದಿದೆ : ಡಾ. ಮನುಜೇಶ್.ಬಿ.ಜೆ

ನ್ಯಾನೋ ತಂತ್ರಜ್ಞಾನದಲ್ಲಿ ಹನುಮಂತನ ಇರುವಿಕೆ ಕಂಡುಬಂದಿದೆ : ಡಾ. ಮನುಜೇಶ್.ಬಿ.ಜೆ

ಪುತ್ತೂರು (ದಕ್ಷಿಣ ಕನ್ನಡ): ರಾಮಾಯಣ ಮಹಾಕಾವ್ಯ ಮಣ್ಣಿನ ಶ್ರೇಷ್ಟತೆಯನ್ನು ಎತ್ತಿ ತೋರಿಸುತ್ತದೆ, ಅಲ್ಲದೆ ಅಲ್ಲಿ ಬರುವಂತಹ ಪ್ರತಿಯೊಂದು ಪಾತ್ರಗಳೂ ಅನೇಕ ರೀತಿಯ ತಂತ್ರಜ್ಞಾನಗಳನ್ನು ಪರಿಚಯಿಸುತ್ತವೆ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ ಶ್ರೀರಾಮ ಸಪ್ತಾಹ ಕಾರ್ಯಕ್ರಮದಲ್ಲಿ ರಾಮಾಯಣದಲ್ಲಿ ತಾಂತ್ರಿಕತೆ ಎನ್ನುವ ವಿಷಯದ ಕುರಿತು ಮಾತನಾಡಿದರು. ಹನುಮಂತನ ಇರುವಿಕೆಯನ್ನು ನಾವು ನ್ಯಾನೋ ತಂತ್ರಜ್ಞಾನವನ್ನು ನೋಡಿದ್ದೇವೆ. 7000 ವರ್ಷಗಳ ಹಿಂದೆಯೇ ಹೊಲೋಗ್ರಾಂ ತಂತ್ರಜ್ಞಾನ ಅಸ್ತಿತ್ವದಲ್ಲಿ ಇತ್ತು, ರಾಮಾಯಣದಲ್ಲಿ ಬರುವ ಸಂಜೀವಿನಿ ಹಿಂದೂ ಧರ್ಮದ ಪ್ರಕಾರ ಒಂದು ಮಾಂತ್ರಿಕ ಗಿಡಮೂಲಿಕೆ. ನರಮಂಡಲದ ಗಂಭೀರ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ಈ ಔಷಧಿಗಿದೆ ಎಂದು ಅವರು ಹೇಳಿದರು.

ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ ಮಾತನಾಡಿ ರಾಮಾಯಣದಲ್ಲಿ ರಾಮಸೇತುವಿನ ಉಲ್ಲೇಖಗಳು ನಮಗೆ ಕಾಣಸಿಗುತ್ತವೆ. 2004 ರಿಂದ ಈಚೆಗೆ ರಾಮಸೇತುವುನ ಬಗ್ಗೆ ಅನೇಕ ಚರ್ಚೆಗಳನ್ನು ನಾವು ಕಾಣಬಹುದು. ಇದು ಭಾರತ ಹಾಗೂ ಶ್ರೀಲಂಕಾದ ನಡುವೆ ಸುಮಾರು 36 ಕಿಮೀ ಉದ್ದದ ಬೆಸುಗೆಯಾಗಿದ್ದು, ನಾಸಾದವರು ನಡೆಸಿದ ಸಂಶೋಧನೆಯಲ್ಲಿ ರಾಮಸೇತುವಿನ ಇರುವಿಕೆ ಗೋಚರವಾಗುತ್ತದೆ. ಸಮುದ್ರ ಶಾಸ್ತ್ರದ ಅಧ್ಯಯನಗಳ ಪ್ರಕಾರ ಸೇತುವೆ 7000 ವರ್ಷಗಳಷ್ಟು ಹಳೆಯದು ಎನ್ನುವ ಮಾಹಿತಿಗಳೂ ಲಭ್ಯವಾಗಿದೆ. ರಾಮಾಯಣ ಮಹಾಕಾವ್ಯವಾದರೂ ಅದರಲ್ಲಿ ಅಡಕವಾಗಿರುವ ತಾಂತ್ರಿಕತೆ ಅಗಾಧವಾದದ್ದು ಮತ್ತು ಅಧ್ಯಯನ ಯೋಗ್ಯವಾದದ್ದು ಎಂದಿದ್ದಾರೆ.

ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ಡಾ.ಯಶೋಧಾ ರಾಮಚಂದ್ರ, ಪ್ರಾಂಶುಪಾಲ ಡಾ.ಮಹೇಶ್‍ ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Prev Post

“ಹಂತಕಿ ಐ ಲವ್ ಯೂ” ಸೈಕೋಪಾಥ್ ಒಬ್ಬಳ ಪ್ರೇಮಕಥೆ | ಹಣಮಂತ ಎಂ.ಕೆ.

Next Post

ಕಣ್ಣ ರೆಪ್ಪೆಗಳ ನಡುವೆ | ಶಿಲ್ಪ ಬಿ

post-bars

Leave a Comment

Related post