About the Author

ಕಾದಂಬರಿಕಾರ ಎ. ಶ್ರೀನಿವಾಸ್‌ ಪ್ರಸಾದ್ ಮೂಲತಃ ಬೆಂಗಳೂರು ನಿವಾಸಿ. ವಿಜಯ ಸಂಜೆ ಕಾಲೇಜಿನಲ್ಲಿ ತಮ್ಮ ಬಿ.ಎ. ಪದವಿ ಮುಗಿಸಿ ಪ್ರಸ್ತುತ ಸರ್ಕಾರಿ ನೌಕರಿಯಲ್ಲಿದ್ದಾರೆ. ಸಂಗೀತ, ಸಾಹಿತ್ಯ ಹಾಗೂ ರಂಗಭೂಮಿಯ ಕಡೆಗೆ ಒಲವುಳ್ಳವರು. ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುವುದು ಇವರ ಹವ್ಯಾಸ. ತನ್ನ ತಾನರಿವನಕ ಎಂಬ ಮಾತಿನಲ್ಲಿ ನಂಬಿಕೆಯಿಟ್ಟು, ಅಖಂಡ ಕರ್ನಾಟಕವನ್ನು ಪ್ರದಕ್ಷಿಣೆ ಹಾಕಬೇಕೆಂಬ ಹಂಬಲದಲ್ಲಿ ಶೇ. ಎಂಬತ್ತು ಭಾಗ ಕರ್ನಾಟಕದ ಪರಿಚಯ ಇವರಿಗಿದೆ.. ಯುವಮನಸ್ಸಿನ ಎಲ್ಲ ಹಂಬಲಗಳೂ, ಒಳಿತುಗಳೂ ಶ್ರೀನಿವಾಸ್ ಪ್ರಸಾದರ ಮನದಲ್ಲಿ ಅಚ್ಚೊತ್ತಿದ್ದು ಆ ದಿಸೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ’ಕತ್ತಲ ಕಾನು’ ಅವರ ಚೊಚ್ಚಲ ಕಾದಂಬರಿ.

ಎ. ಶ್ರೀನಿವಾಸ್ ಪ್ರಸಾದ್