About the Author

ಆನಸೋಸಲು ಬಸರಾಳು ಹೋಬಳಿ ಮಂಡ್ಯ ತಾಲ್ಲೂಕು ಮಂಡ್ಯ ಜಿಲ್ಲೆ ದ್ಯಾಪಸಂದ್ರದ ದಾಸೇಗೌಡರು ಕುಟುಂಬಕ್ಕೆ ಸೇರಿದ ಆ ರಾ ಬಾಲಕೃಷ್ಣ ಇವರು ಪದ್ಮಮ್ಮ- ದಿ.ರಾಜಪ್ಪ ರವರ ಮಗನಾಗಿ ದಿನಾಂಕ 5 ಮಾರ್ಚ್ 1983ರಲ್ಲಿ ಹುಟ್ಟು ದೈಹಿಕ ಅಂಗವಿಕಲರಾಗಿ ಜನಿಸಿದ್ದರು.

ತಮ್ಮ ಸ್ವಗ್ರಾಮವಾದ ಆನಸೋಸಲು ಗ್ರಾಮದಲ್ಲಿ 1988 ರಿಂದ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ನಂತರ ಮಂಡ್ಯ ತಾಲ್ಲೂಕು ಶಿವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 1998ರಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿರುತ್ತಾರೆ 1998ರಲ್ಲಿ ತಮ್ಮ ತಂದೆಯ ಆಕಾಲಿಕ ಮರಣದಿಂದಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಏಳು ವರ್ಷದ ನಂತರ ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮಾಂತರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 2005ರಿಂದ 2007ನೇ ವರ್ಷ ದಲ್ಲಿ ಕಲಾವಿಭಾಗದಿಂದ ಪಿ ಯು ಸಿ ತೇರ್ಗಡೆ ನಂತರ 2007ರಿಂದ 2009ನೇ ಸಾಲಿನವರೆಗೆ ಐತಿಹಾಸಿಕ ಶ್ರೀ ರಂಗ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ತರಬೇತಿಯನ್ನು ಪಡೆದು ಶೇಕಡ 80ರಷ್ಟು ಅಂಕಗಳಿಸಿ ತೇರ್ಗಡೆ ಹೊಂದಿರುತ್ತಾರೆ.

ಕೃತಿಗಳು; ಕಾಡು ಮಲ್ಲಿಗೆ

ಆ ರಾ ಬಾಲಕೃಷ್ಣ

(05 Mar 1983)