About the Author

ಅಭಿಷೇಕ ಪೈ ಅವರು ಉಡುಪಿಯ ಸಾಬ್ರಕಟ್ಟೆಯಲ್ಲಿ ಸೆಪ್ಟಂಬರ್ 8, 1995ರಲ್ಲಿ ಜನಿಸಿದರು. ತಂದೆ ನಿತ್ಯಾನಂದ ಪೈ, ತಾಯಿ ಚಂದ್ರಕಲಾ ಪೈ. ತಮ್ಮ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಅಲ್ಲೇ ಮುಗಿಸಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದು ಪ್ರಸ್ತುತ ಕರ್ನಾಟಕ ಬ್ಯಾಂಕ್ ನ ಪ್ರಧಾನ ಕಛೇರಿ ಮಂಗಳೂರಿನಲ್ಲಿ ಕೃಷಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಹಲವು ಕವಿತೆಗಳು, ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸಾಹಿತ್ಯ ಕೃಷಿಯ ಜೊತೆಗೆ ಕಾರ್ಯಕ್ರಮ ನಿರೂಪಣೆ ಮತ್ತು ಚಾರಣ ಇವರ ಹವ್ಯಾಸ, ‘ಉಲಿವ ಹಕ್ಕಿ ಮತ್ತು ನಕ್ಷತ್ರ’ ಇವರ ಮೊದಲ ಕವನ ಸಂಕಲನ.

ಅಭಿಷೇಕ ಪೈ

(08 Sep 1995)