About the Author

ಅಣ್ಣಾಜಿ ಕೃಷ್ಣ ವರ್ಣಾರು ಅವರು ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಬಳಿಯ ಹಂಗ್ಳೂರು (ಜನನ: 1868 ಜುಲೈ 20 ) ಗ್ರಾಮದವರು. ಗಣಿತ, ಜೋತಿಷ್ಯ ಶಾಸ್ತ್ರ ಪ್ರವೀಣರು. ಪಂಚಾಂಗಗಳನ್ನು ಸಿದ್ದಪಡಿಸಿ ಕೆಲವು ವರ್ಷಗಳ ಕಾಲ ಪ್ರಕಟಿಸಿದರು. ವೃತ್ತಿಯಲ್ಲಿ ಗ್ರಾಮಪುರೋಹಿತರಾಗಿದ್ದರು. ವೈದಿಕ ವ್ಯವಸಾಯವನ್ನು ಅವಲಂಬಿಸಿದ್ದರು.

ಕೃತಿಗಳು: ಪದ್ಮಾಕ್ಷನ ಕಾಳಗವು(1899), ಸೀತಾ ಉದಯವು(1899), ಮದನಸುಂದರೀ ಸ್ವಯಂವರವು(1900), ಚಂಪಕಾ ಸ್ವಯಂವರ, ದ್ವಿಜಾಧಮ ಚರಿತ್ರೆ. ಸಂಸ್ಕೃತ ಕೃತಿಗಳು: ಪ್ರಯೋಗಭಾಸ್ಕರ, ಸುಭೋಧಗಣಿತಂ.

ಅಣ್ಣಾಜಿ  ಕೃಷ್ಣ ವರ್ಣಾರು ಅವರು 1927 ನವೆಂಬರ್ 15 ರಂದು  ನಿಧನರಾದರು.

ಅಣ್ಣಾಜಿ ಕೃಷ್ಣ ವರ್ಣಾರು

(20 Jul 1868-15 Nov 1927)