About the Author

ಬಿ.ಸಿ.ದೇಸಾಯಿಯವರು ಕವಿಯಾಗಿ,ನಾಟಕಕಾರರಾಗಿ,ವಿಮರ್ಶಕರಾಗಿ ಸಾಹಿತ್ಯ ಕೃಷಿ ಮಾಡಿದವರು. ಮಾರ್ಕ್ಸ್‌ವಾದಿ ವಿಮರ್ಶೆಯನ್ನು ಎತ್ತಿ ಹಿಡಿದು ತಮ್ಮ ಅನಿಸಿಕೆ, ನಿಲುವುಗಳನ್ನು ತಳೆದಿದ್ದವರು. 1972 ರಲ್ಲಿ ಅವರ ಏಕೈಕ ಕವನ ಸಂಕಲನ ’ಹುಸಿ’ ಪ್ರಕಟವಾಗಿತ್ತು. ಇದು ನವ್ಯ ಕಾಲದ ಸಾಹಿತ್ಯ ಸೃಷ್ಠಿಗೆ ಸೇರಿ ದೇಸಾಯಿಯವರ ಸಾಹಿತ್ಯ ರಚನೆ ಪರಿಚಯವಾಯಿತು. ನಂತರ ಅವರ ’ಸಾವು ಮತ್ತು ಇತರ ಕತೆಗಳು’ ಅವರ ಕಥಾ ಸಂಕಲನ ಬೆಳಕಿಗೆ ಬಂದಿತು. ರುಜುವಾತು, ಶೂದ್ರ, ಸಂಕ್ರಮಣ, ಮುಂತಾದವುಗಳು ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳಾಗಿವೆ. ಅವರ ಇನ್ನೂ 27  ಅಪ್ರಕಟಿತ ಕವನಗಳ ಒಂದು ಸಂಕಲನ ಇನ್ನೂ ಬೆಳಕು ಕಾಣಬೇಕಿದೆ.  

ಬಿ.ಸಿ. ದೇಸಾಯಿ

(24 Feb 1941-13 Nov 1990)