About the Author

ಲೇಖಕ ಬಿ. ಜನಾರ್ದನ ಪೂಜಾರಿ ಅವರು ಕೇಂದ್ರ ಮಾಜಿ ಸಚಿವರು. ವಾಗ್ಮಿಗಳು. ಮೂಲತಃ ಮಂಗಳೂರಿನವರು. ಕಾನೂನು ಪದವೀಧರರು. 1960-1979ರವರೆಗೆ ಅವರು ಮಂಗಳೂರಿನ ಕೋರ್ಟಿನಲ್ಲಿ ಪ್ರಾಕ್ಟೀಸ್ ಮಾಡಿದ್ದು, ತದನಂತರ ಅವರು ರಾಜಕಾರಣದಲ್ಲಿ ಸಕ್ರಿಯರಾದರು. ತುಳು ನಾಡು ವ್ಯಾಪ್ತಿಯಲ್ಲಿ ಹಲವು ದೇವಾಲಯಗಳ ನಿರ್ಮಾಣ ಹಾಗೂ ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಇವರ ಪಾತ್ರ ದೊಡ್ಡದು. 2003ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಕೃತಿಗಳು: ಸಾಲಮೇಳದ ಸಂಗ್ರಾಮ (ಆತ್ಮಕಥೆ)

ಬಿ. ಜನಾರ್ದನ ಪೂಜಾರಿ

(27 Apr 1937)